ಕರಾವಳಿ

ಹಬ್ಬದಲ್ಲಿ ಯಾರೂ ಮೈಮರೆಯಬಾರದು – ಹಬ್ಬಗಳ ಆಚರಣೆ ಸಂದರ್ಭ ಎಚ್ಚರ ಅಗತ್ಯ : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು : ಕೊರೋನಾ ಎರಡನೇ ಅಲೆ ಇನ್ನೂ ಹೋಗಿಲ್ಲ. ಈ ನಡುವೆಯೇ ನವರಾತ್ರಿ, ದಸರಾ ಹಬ್ಬ ಬಂದಿದೆ. ಈ ಹಬ್ಬದಲ್ಲಿ ಯಾರೂ ಮೈಮರೆಯಬಾರದು. ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೆ ಕೋವಿಡ್ ನಿಯಮ ಪಾಲಿಸಲೇ ಬೇಕು ಎಂದು ಜಿಲ್ಲಾಧಿಕಾರಿಯವರು ಕರೆ ನೀಡಿದ್ದಾರೆ.

ಕೋವಿಡ್ ಲಸಿಕೆ ಪಡೆದುಕೊಳ್ಳಲು ಆದ್ಯತೆ ನೀಡಬೇಕು. ಮನೆಯಲ್ಲೇ ಹಬ್ಬ ಆಚರಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ನೆರವಾಗಬೇಕು ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Comments are closed.