ಕುಂದಾಪುರ: ಗ್ರಾ.ಪಂ ಚುನಾವಣೆಯಲ್ಲಿ ಎರಡನೇ ಭಾರಿಗೆ ವಿಶೇಷ ಚೇತನ ಸುಧಾಕರ್ ಪೂಜಾರಿ (47) ಹಂಗಳೂರು ಪಂಚಾಯತ್ ನ 4ನೇ ವಾರ್ಡ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ.

ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ ಒಂದು ಕಾಲಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಅವರು ಸಮಾಜ ಸೇವೆಯ ತುಡಿತ ದಿಂದ ಕಳೆದ ವರ್ಷ ಇದೇ ವಾರ್ಡಿನಿಂದ ಗೆದ್ದಿದ್ದರು.
ಈ ಬಗ್ಗೆ ಮಾತನಾಡಿದ ಸುಧಾಕರ್ ಅವರು ನನ್ನನ್ನು ಎರಡನೇ ಬಾರಿಗೆ ಆಯ್ಕೆ ಮಾಡಿದ ಜನತೆಗೆ ನನ್ನ ಹೃತ್ಪೂರ್ವಕ ವಂದನೆಗಳು. ಇನ್ನಷ್ಟು ಜನಸೇವೆ ಮಾಡುವ ಅವಕಾಶ ಕೊಟ್ಟಿದ್ದಾರೆ. ಸಂಪೂರ್ಣವಾಗಿ ಜನರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ತಲೆದೂಗಿ ಜನಸೇವೆ ಮಾಡುತ್ತೇನೆ ಎಂದರು.
(ಯೋಗೀಶ್ ಕುಂಭಾಸಿ)
Comments are closed.