ಕರಾವಳಿ

ಇನ್ ಸ್ಟ್ರಾಗ್ರಾಂನಲ್ಲಿ ಪರಿಚಯವಾದ ಆತ ಸಂಸಾರಕ್ಕೆ ಒಲ್ಲೆ ಅಂದಿದ್ದಕೆ ಬಾರದ ಲೋಕಕ್ಕೆ ಆಕೆ ಪಯಣ..!

Pinterest LinkedIn Tumblr

ಉಡುಪಿ: ಆಕೆಗೆ ಮಾಡೆಲಿಂಗ್ ಗೀಳು, ಇನ್ ಸ್ಟ್ರಾಗ್ರಾಂ ಗೆ ಹೋದ್ರೆ ಆಕೆಯದ್ದೇ ಕಲರ್ ಪೂಲ್ ದುನಿಯಾ, ಕಾಲೇಜು ಕನ್ಯೆಯಾದ್ರೂ, ಲೀವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದವಳು ಇದೀಗ ಹೆಣವಾಗಿ ಆಸ್ಪತ್ರೆ ತಲುಪಿದ್ದಾಳೆ. ಜೊತೆಗಾರನೇ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪರಾರಿಯಾಗಿದ್ದ ಈ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಇನ್ ಸ್ಟ್ರಾಗ್ರಾಂ ನಲ್ಲಿ ಪರಿಚಯವಾದ ಆ ಕನ್ಯೆ ತನ್ನೊಂದಿಗೆ ಸಂಸಾರ ಮಾಡುವಂತೆ ದುಂಬಾಲು ಬಿದ್ದಿದ್ದಳು. ಈತ ಅದಕ್ಕೆ ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆಗಿನ್ನೂ 19 ರ ವಯಸ್ಸು, ಉಡುಪಿಯ ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ದ್ವಿತೀಯ ಪದವಿಯನ್ನು ಓದುತ್ತಿದ್ದಾಳೆ. ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ನಗರ ಗಾಂಧಿ ಆಸ್ಪತ್ರೆಗೆ ಓರ್ವ ಯುವಕ ಬಂದು, ಇವಳನ್ನು ಚಿಂತಾಜನಕ ಸ್ಥಿತಿಯಲ್ಲಿ ದಾಖಲಿಸಿ ಕಣ್ಮರೆಯಾಗಿದ್ದಾನೆ. ಈ ಅಪರಿಚಿತನೇ ರಕ್ಷಿತಾಳ ಮನೆಯವರಿಗೂ ಕರೆ ಮಾಡಿ, ಮಗಳ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ, ಆಸ್ಪತ್ರೆಗೆ ಬನ್ನಿ ಎಂದು ಹೇಳಿದವ, ಮರುಗಳಿಗೆಯಲ್ಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಆಸ್ಪತ್ರೆಯ ಮೆಟ್ಟಿಲೇರಿದ ಮರುಕ್ಷಣದಲ್ಲೇ ಅಸುನೀಗಿದ್ದಾಳೆ. ಕತ್ತಿನಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತಿದೆ. ಹಾಗಾಗಿ ಇದೊಂದು ಸಂಶಯಾಸ್ಪದ ಸಾವು ಅನ್ನೋದು ಮನೆಯವರಿಗೆ ಗೊತ್ತಾಗಿದೆ. ಸದ್ಯ ಈ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಹೇಳಿ ಉಡುಪಿ ನಗರ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ಸದ್ಯ ಆಯುವಕನನ್ನು ಪೊಲೀಸರು ಸೋಮವಾರ ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.

ರಕ್ಷಿತಾಳ ಮಣಿಪಾಲದ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾಳೆ. ಮಾಡೆಲಿಂಗ್ ಅಂದ್ರೆ ಪಂಚಪ್ರಾಣ,ಅಪ್ಪಟ ಹಳ್ಳಿಯ ಹುಡುಗಿಯಾದ್ರೂ, ಪಕ್ಕಾ ಸಿಟಿ ಹುಡುಗಿಯಂತೆ ಬದುಕುತಿದ್ಲು! ಇನ್ ಸ್ಟ್ರಾಗ್ರಾಂ ನಲ್ಲಿ ಕಲರ್ ಫುಲ್ ಪೋಸು ಕೊಟ್ಟು ಫೊಟೋ ಹಾಕುತ್ತಿದ್ಲು. ಮಾಡೆಲಿಂ ಗ್ ನಲ್ಲೂ ಒಂದು ಕೈ ನೋಡೋಣ ಅನ್ನೋ ಪ್ರಯತ್ನಾನೂ ಸಾಗಿತ್ತು. ಮನೆಯಿಂದ ಬಹುತೇಖ ಸಂಪರ್ಕ ಕಡಿದುಕೊಂಡಿದ್ದ ಈಕೆಯ ಬದುಕಿನ ದಿಕ್ಕುತಪ್ಪಿಸಿದವನೇ ಪ್ರಶಾಂತ್ ಕುಂದರ್. ಹೌದು, ರಕ್ಷಿತಾಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದವನೂ ಅವನೇ. ಫರ್ನೀಚರ್ ಅಂಗಡಿಯಗಲ್ಲಿ ಡಿಸೈನರ್ ಕಂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುವ ಇವನಿಗೆ, ಈಗಾಗಲೇ ಒಂದು ಮದುವೆ ಆಗಿತ್ತು. ಯೌವನದ ಹುಚ್ಚಾಟದಲ್ಲಿದ್ದ ರಕ್ಷಿತಾಗೆ ಅದೇನೋ ಕನಸು ಹಚ್ಚಿ, ಆಕೆಯೊಂದಿಗೆ ಲೀವಿಂಗ್ ರಿಲೇಶನ್ ಶಿಪ್ ಬೇರೆ ನಡೆಸುತ್ತಿದ್ದ. ಈತನ ಈ ಚಾಳಿ ತಿಳಿದ ಪತ್ನಿ, ಇದೇ ವಿಚಾರದಲ್ಲಿ ರಕ್ಷಿತಾಗೂ ದಬಾಯಿಸಿರಬೇಕು ಅನ್ನೋ ಮಾತು ಕೇಳಿಬರುತ್ತಿದೆ. ಇದೇ ಸಂಘರ್ಷ ಈಗ ರಕ್ಷಿತಾಳ ಸಾವಿನಲ್ಲಿ ಕೊನೆಯಾಗಿದೆ. ಸಾಯುವ ಮುನ್ನಾ ಪ್ರಿಯಕರನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಇದರಿಂದ ಹೆದರಿದ ಆತ ಬಾಡಿಗೆ ಮನೆಯತ್ತ ಓಡೋಡಿ ಬಂದಿದ್ದಾನೆ. ಅಷ್ಟರಲ್ಲಾಗಲೇ ಆಕೆ ನೇಣೀಗೆ ಕೊರಳೊಡ್ಡಿದ್ದು ಆಸ್ಪತ್ರೆಗೆ ಸಾಗಿಸಿದ ಆತ ಭಯದಿಂದ ಪರಾರಿಯಾಗಿದ್ದ.

ಈ ಪ್ರಶಾಂತ್ ಹೆಣ್ಮಕ್ಕಳಿಗೆ ಅದರಲ್ಲೂ ಸಣ್ಣ ಪ್ರಾಯದ ಯುವತಿಯರಿಗೆ ವಂಚಿಸಿರೋದು ಇದೇ ಮೊದಲಲ್ಲ , ಈ ಹಿಂದೆಯೂ ಈತನ ಮೂಲ ಊರು ಬೈಂದೂರಿನ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟು ಸಿಕ್ಕಿ ಬಿದ್ದಿದ್ದ ಎಂದು ತಿಳಿದುಬಂದಿದೆ.

Comments are closed.