ಕರಾವಳಿ

ನವರಾತ್ರಿ ಉತ್ಸವಕ್ಕಾಗಿ ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಗುಲಿ ಬಾಲಕ ಸಾವು

Pinterest LinkedIn Tumblr

ಕುಂದಾಪುರ: ನವರಾತ್ರಿ ಉತ್ಸವಕ್ಕಾಗಿ ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಗುಲಿ 16 ವರ್ಷದ ಬಾಲಕ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ.

ಇಲ್ಲಿನ ಉಪ್ಪಿನ ಕುದ್ರು ನಿವಾಸಿ ಗಂಗಾಧರ ಆಚಾರ್ ಅವರ ಪುತ್ರ ಧನುಷ್ (16) ಮೃತ ದುರ್ದೈವಿ ಬಾಲಕ.

(ಸಾಂದರ್ಭಿಕ ಚಿತ್ರ)

ಧನುಷ್ ತನ್ನ ಮನೆ ಸಮೀಪದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿದ್ದು, ರಾತ್ರಿ 9.30 ಗಂಟೆಗೆ ದೇವಸ್ಥಾನದಲ್ಲಿ ಕಾರ್ಯಕ್ರಮದ ನಿಮಿತ್ತ ವಿದ್ಯುದ್ದೀಪದ ಅಲಂಕಾರ ಮಾಡಿದ ದೇವಸ್ಥಾನದ ದಕ್ಷಿಣ ದಿಕ್ಕಿನ ಕಂಪೌಂಡ್ ಗೋಡೆಗೆ ಅಳವಡಿಸಿದ ವಿದ್ಯುದ್ದೀಪದ ಕೇಬಲ್ ಆಕಸ್ಮಿಕವಾಗಿ ತಾಗಿ ಅಸ್ವಸ್ಥಗೊಂಡಿದ್ದು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಧನುಷ ಹತ್ತನೆ ತರಗತಿ ಓದುತ್ತಿದ್ದ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.