ಉಡುಪಿ: ಕಾಪು ತಾಲೂಕಿನ ಮಜೂರು ಗ್ರಾಮದ ಸಾನದ ಮನೆ ರಮೇಶ್ ಪೂಜಾರಿ ಅವರ ಮನೆಯ ಹಸುವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತ್ರಿವಳಿ ಕರುಗಳಿಗೆ ಜನ್ಮ ನೀಡಿದ್ದು ಕೌತುಕಕ್ಕೆ ಕಾರಣವಾಗಿದೆ.
ಗುರುವಾರ ನಾಲ್ಕನೇ ಬಾರಿಗೆ ಕರು ಹಾಕುವ ವೇಳೆ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅಷ್ಟಮಿ ದಿನ ಜನಿಸಿದ ಕರುಗಳಿಗೆ ಕೃಷ್ಣ, ಬಲರಾಮ, ಸುಭದ್ರ ಎಂದು ಹೆಸರಿಡಲಾಗಿದೆ. ಗುರುವಾರ ಸಹಜ ರೀತಿಯಲ್ಲಿ ನೋವು ಕಾಣಿಸಿಕೊಂಡಿದ್ದು ಕೆಲ ಸಮಯದ ಬಳಿಕ ಕರು ಹಾಕಿದೆ. ಬಳಿಕ ಪಶು ವೈದ್ಯಾದಿಕಾರಿ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅವರು ಆಗಮಿಸಿ ದನ ಮತ್ತು ಕರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ತ್ರಿವಳಿ ಕರುಗಳನ್ನು ಕಾಣಲು ಸ್ಥಳಿಯ ನಿವಾಸಿಗಳು ಆಗಮಿಸಿದರು.
Comments are closed.