ಕರಾವಳಿ

ಸಂಘನಿಕೇತನ ಗಣೇಶೋತ್ಸವ ಸಮಾಪನ : ಮಹಾಮಾಯಿ ಪುಷ್ಕರಣಿಯಲ್ಲಿ ಜಲಸ್ಥಂಭನ

Pinterest LinkedIn Tumblr

ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ  73ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ ಸಂಘನಿಕೇತನ ದಲ್ಲಿ ನಡೆದ ಗಣೇಶೋತ್ಸವ ಮಂಗಳವಾರ ಸಮಾಪನಗೊಂಡಿತು.

ಕೊರೋನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತೀ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು . ಈ ಬಾರಿ ಶೋಭಾಯಾತ್ರೆ ಆಯೋಜಿಸಲಿಲ್ಲ ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ಥಂಭನ ಗೊಳಿಸಲಾಯಿತು.

ಬೆಳಿಗ್ಗೆ ಪೂಜೆ ಮಧ್ಯಾನಃ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಬಳಿಕ ವಿಸರ್ಜನೆ ವಂದೇ ಮಾತರಂ ತದನಂತರ ನಗರದ ಕಾರ್‌ಸ್ಟ್ರೀಟ್ ನ ಮಹಾಮಾಯಿ ಪುಷ್ಕರಣಿಯಲ್ಲಿ ಜಲಸ್ಥಂಭನ ಗೊಳಿಸಲಾಯಿತು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.