ಕರಾವಳಿ

ಸಂಗೀತ ವಿದುಷಿ ಶ್ರೀಮತಿ ರತ್ನಾವತಿ ಸಂಜೀವ ಆಚಾರ್‌ಗೆ ಕಲಾಪುರಸ್ಕಾರ

Pinterest LinkedIn Tumblr

ಮಂಗಳೂರು : ಸಂಗೀತ ವಿದುಷಿ ಶ್ರೀಮತಿ ರತ್ನಾವತಿ ಸಂಜೀವ ಆಚಾರ್ ಕೋಡಿಕಲ್ ಅವರಿಗೆ ಸಂಸ್ಕಾರ ಭಾರತಿ ಕಲಾಪುರಸ್ಕಾರ ನೀಡಿ ಗೌರವಿಸಿದೆ.

ಇತ್ತೀಚೆಗೆ ನಗರದ ನಾಗುರಿ ಗರೋಡಿಯ ಅಟ್ಟಣೆ ಸಭಾಂಗಣದಲ್ಲಿ ಜರಗಿದ ಈ ಸಮಾರಂಭದಲ್ಲಿ ಶ್ರೀಮತಿ ರತ್ನಾವತಿ ಸಂಜೀವ ಆಚಾರ್ ಕೋಡಿಕಲ್ ಅವರಿಗೆ ಸಂಸ್ಕಾರ ಭಾರತಿ ಕಲಾಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕ ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ| ಸತೀಶ್ ರಾವ್, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯರಾದ ಸೂರ್ಯನಾರಾಯಣ ಭಟ್ ಕಶೆಕೋಡಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸಂಸ್ಕಾರ ಭಾರತೀಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಸಂಸ್ಕಾರ ಭಾರತೀಯ ಮಂಗಳೂರು ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ, ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.