ಕರಾವಳಿ

ಕೋವಿಡ್-19 ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗಳಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗಳಿಗೆ ಕದ್ರಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸನ್ಮಾನ ಮಾಡಲಾಯಿತು.

ಶಾಸಕ ವೇದವ್ಯಾಸ್ ಕಾಮತ್ ಬ್ಯಾಂಕ್ ಸಿಬ್ಬಂದಿಗಳ ನಿಷ್ಠೆಯನ್ನು ಪ್ರಶಂಸಿಸುತ್ತಾ ದೇಶ ಕೊರೋನಾ ಸಂಕಷ್ಟವನ್ಮ್ನ ಎದುರಿಸ್ಮತ್ತಿರುವ ಈ ಸಂದರ್ಭದಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದು ಕೋವಿಡ್ – 19ರ ವಿರುದ್ಧ ಹೋರಾಟದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದು, ಇತರ ಕೊವಿಡ್ ವಾರಿಯರ್ಸ್ ನಂತ ಬ್ಯಾಂಕ್ ಸಿಬ್ಬಂದಿಗಳು ಕೂಡ ಸನ್ಮಾನಕ್ಕೆ ಯೋಗ್ಯರು ಎಂದು ಪ್ರಶಂಸಿಸದರು.

ಸಾರ್ವಜನಿಕ ಪರವಾಗಿ ಜಿಲ್ಲಾ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಮಹಾ ಪ್ರಭಂದಕ ಯೋಗಿಶ್ ಅಚಾರ್ಯ ಅವರನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳ ಪ್ರತಿನಿಧಿಯಾಗಿ ಮತ್ತು ಕದ್ರಿ ಶಾಖೆಯ ಮುಖ್ಯ ಪ್ರಭಂದಕ ರಂಜನ್ ಕೇಟರ್ ಹಾಗೂ ಶಾಖೆಯ ಎಲ್ಲಾ ಸಿಬ್ಬಂದಿಗಳನ್ನು ಪುಷ್ಪ ನೀಡಿ ಸನ್ಮಾನ್ಯ ಶಾಸಕರು ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್‍ನ ಮುಖ್ಯ ಪ್ರಭಂದಕ ಪ್ರವೀಣ್ ಎಮ್.ಪಿ. ಸಹಾಯಕ ಮಹಾ ಪ್ರಭಂದಕ ಪುಪ್ಪರಾಜ್ ಹೆಗ್ಡೆ, ರಮಾಕಾಂತ್ ಭಟ್ ಹಾಗೂ ಅಮುಲ್ಯ ಸಾಕ್ಯಾರತೆ ಕೇಂದ್ರದ ಹಿರಿಯ ಸಹೆಯಗಾರ ಸರೀಶ್ ಅತ್ತಾವರ್ ಮತ್ತಿತರು ಉಪಸ್ಥಿರಿದರು.

ಬ್ಯಾಂಕಿನ ಗ್ರಾಹಕರಾದ ಹೇಮಂತ ಬಿಡ ಮತ್ತು ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.