ಕರಾವಳಿ

ಕದ್ರಿ ಠಾಣೆಯ ಎಎಸ್‌ಐ ಸಂತೋಷ್ ಪಡೀಲ್ ಅವರಿಗೆ ‘ವಾರಿಯರ್ ಆಫ್ ದಿ ಡೇ’ ಗೌರವ

Pinterest LinkedIn Tumblr

ಮಂಗಳೂರು, ಎಪ್ರಿಲ್.15: ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಿದ್ದಾರೆ.

ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಕದ್ರಿ ಠಾಣೆಯ ಎಎಸ್‌ಐ ಸಂತೋಷ್ ಪಡೀಲ್ ಅವರಿಗೆ ಈ ಗೌರವ ಸಂದಿದೆ.

ಮಂಗಳವಾರ ಕದ್ರಿ ಠಾಣೆಯ ಎಎಸ್‌ಐ ಸಂತೋಷ್ ಪಡೀಲ್ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ. ಸಂತೋಷ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳ ಮೂಲದ ಮಗುವಿಗೆ ಮೆಡಿಕಲ್ ವ್ಯವಸ್ಥೆ ಕಲ್ಪಿಸಿ ತನ್ನ ವಾಹನದಲ್ಲೇ ತಲಪಾಡಿ ಗಡಿ ದಾಟಿಸುವ ಮೂಲಕ‌ ಹೆತ್ತವರ ಮಡಿಲಿಗೆ ಒಪ್ಪಿಸಿದ್ದರು.

Comments are closed.