ಕರಾವಳಿ

ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕಕಲ್ಯಾಣಾರ್ಥ ಸುಭಿಕ್ಷೆ ಮಳೆ, ಬೆಳೆಗಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಳಾಭಿಷೇಕ

Pinterest LinkedIn Tumblr

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಹತ್ತು ಸಮಸ್ತರು, ಸಾರ್ವಜನಿಕ ಸಂಘಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರದಂದು ಬೆಳಿಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷರಾದ‌ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ, ಸುಭಿಕ್ಷೆ ಮಳೆ, ಬೆಳೆ, ಫಲಪ್ರಾಪ್ತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸೀಯಾಳಾಭಿಷೇಕ ನಡೆಸಲಾಯಿತು.

ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ ಉಪಸ್ಥಿತರಿದ್ದರು. ಊರಹತ್ತು ಸಮಸ್ತರು, ಜನ ಪ್ರತಿನಿಧಿಗಳುಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿಕಲ್ಕೂರ ಪ್ರತಿಷ್ಠಾನವು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭ ಕ್ಷೇತ್ರದ‌ ಅರ್ಚಕರಾದ ರಾಮಣ್ಣ‌ ಅಡಿಗ, ರಾಘವೇಂದ್ರ‌ ಅಡಿಗ, ರವಿ ಅಡಿಗ‌ ಅಲ್ಲದೆ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಗಳಾದ ಹರಿನಾಥ ಜೋಗಿ, ದಿನೇಶ್‌ ದೇವಾಡಿಗ, ಸುರೇಶ್‌ಕುಮಾರ್, ರಂಜನ್‌ಕುಮಾರ್, ಶ್ರೀಮತಿ ಚಂದ್ರಕಲಾ, ಪುಷ್ಪಲತಾ ಶೆಟ್ಟಿ‌ ಇವರಲ್ಲದೆ ಶಶಿಧರ ಹೆಗ್ಡೆ, ಅಶೋಕ ಡಿ.ಕೆ. ರತ್ನಾಕರಜೈನ್, ರೂಪಾ ಡಿ. ಬಂಗೇರ, ವಿಜಯಲಕ್ಷ್ಮೀ ಶೆಟ್ಟಿ, ಪೂರ್ಣಿಮಾರಾವ್ ಪೇಜಾವರ, ಸುಧಾಕರರಾವ್ ಪೇಜಾವರ, ಕದ್ರಿ ನವನೀತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.