ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರಗಳಲ್ಲಿ ಮತ್ತೊಮ್ಮೆ ನಳಿನ್ ಕುಮಾರ್ ಕಟೀಲು ಮತ್ತು ಕುಮಾರಿ ಶೋಭಾ ಕರಂದ್ಲಾಜೆಯವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಕೇಂದ್ರ ಚುನಾವಣ ಸಮಿತಿಯ ನಿರ್ಧಾರವನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತಾ ಅಭ್ಯರ್ಥಿಗಳಿಗೆ ಶುಭಕೊರುವುದಾಗಿ ವಿಧಾನ ಪರಿಷತ್ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಕಳೆದ 5 ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಅಭಿವೃದ್ಧಿಯನ್ನು ಸಾಧಿಸಿ ಮತ್ತೋಮ್ಮೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ವಿಶ್ವಮಾನ್ಯವಾಗಿಸುವತ್ತ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸದೊಂದಿಗೆ ಈ ಬಾರಿಯ ನಿಮ್ಮೆಲ್ಲರ ಪ್ರತಿಯೊಂದು ಮತವು ದೇಶಕ್ಕಾಗಿ, ದೇಶದ ಉಜ್ವಲ ಭವಿಷ್ಯಕ್ಕಾಗಿ, ನಮ್ಮ ಮುಂದಿನ ತಲೆಮಾರುಗಳ ಸಮೃದ್ಧ ಸುಖಿ ಜೀವನಕ್ಕಾಗಿ ಹಾಗೂ ಭಾರತ ಭಾರತವಾಗಿ ಮತ್ತೆ ಎದ್ದು ನಿಲ್ಲುವುದ್ದಾಕ್ಕಾಗಿ ಎಂಬ ಅನಿಸಿಕೆಗಳೊಂದಿಗೆ ನಾವೆಲ್ಲ ಈ ಚುನಾವಣ ಪ್ರಕ್ರೀಯೆಯಲ್ಲಿ ನಮ್ಮೆಲ್ಲರ ಪವಿತ್ರ ಕರ್ತವ್ಯವನ್ನು ನಿರ್ವಹಿಸೋಣ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
Comments are closed.