ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಬಜೆಟ್ : ಸಚಿವ ಯು.ಟಿ.ಖಾದರ್

Pinterest LinkedIn Tumblr

ಮಂಗಳೂರು ಫೆಬ್ರವರಿ 8 : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

 ಕರಾವಳಿ ಹಾಗೂ ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರತೀ ಹೆಕ್ಟೇರ್‍ಗೆ ರೂ 7500 ಪ್ರೋತ್ಸಾಹಧನ ನೀಡುವ ಕರಾವಳಿ ಪ್ಯಾಕೇಜ್‍ಗೆ ರೂ ರೂ 5 ಕೋಟಿ.
 ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‍ಗೆ ರೂ 6 ಪ್ರೋತ್ಸಾಹಧನ.
 ಮೀನುಗಾರಿಕಾ ದೋಣೆಗಳಿಗೆ ಇಸ್ರೊ ಅಧಿಕೃತ ಡಿ.ಎ.ಟಿ ಉಪಕರಣ ಅಳವಡಿಸಲು ಶೇಕಡಾ 50 ಸಹಾಯಧನ, ಇದಕ್ಕಾಗಿ 3 ಕೋಟಿ ರೂ ಅನುದಾನ.
 ಮತ್ಸ್ಯಾಶ್ರಮ ಯೋಜನೆಯಡಿಯಲ್ಲಿ ಮೀನುಗಾರರಿಗೆ ಈ ವರ್ಷ 2500 ಮನೆಗಳ ಪೂರ್ಣ.
 ಮಲ್ಪೆಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ, ತ್ಯಾಜ್ಯನಿರ್ವಹಣ ಘಟಕ ಹಾಗೂ ಇತರ ಸೌಲಭ್ಯಗಳಿಗೆ ರೂ 15 ಕೋಟಿ ಅನುದಾನ.
 ದೋಣಿಗಳಿಗೆ ಡೀಸಲು ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು ರೂ 148.5 ಕೋಟಿ ಅನುದಾನ.
 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ, 1500 ಹೊಸ ಶಾಲಾ ಕೊಠಡಿ ನಿರ್ಮಾಣ.
 ಮಂಗಳೂರಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕ ವ್ಯವಸ್ಥೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ರೂ 500 ಗೌರವಧನ ಹೆಚ್ಚಳ.
 ಹಿಂದುಳಿದ ವರ್ಗಗಳ ಸಣ್ಣ ಪುಟ್ಟ ಸಮುದಾಯಗಳ ಅಭಿವೃದ್ಧಿಗೆ ರೂ 134 ಕೋಟಿ ಅನುದಾನ
 ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ರೂ 25 ಕೋಟಿ ಅನುದಾನ.
 ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ರೂ 200 ಕೋಟಿ ಅನುದಾನ.
 ಆಟೋರಿಕ್ಷಾ / ಟ್ಯಾಕ್ಷಿ ಚಾಲಕರಿಗೆ ಗುಂಪು ವಿಮೆ ಸೌಲಭ್ಯ.
 ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ ಅನುದಾನ.
 ಮಂಗಳೂರು ಮಹಾನಗರಪಾಲಿಕೆಗೆ ರೂ 125 ಕೋಟಿ ಅನುದಾನ.
 ಮಂಗಳೂರಿನಲ್ಲಿ ಕರ್ನಾಟಕ ಜ್ಞಾನ ಆರೋಗ್ಯ ಸಮೃದ್ಧಿ ಕಾರಿಡಾರನ್ನು ಕೋಣಾಜೆಯಿಂದ ಮಣಿಪಾಲದವರೆಗಿನ ಅಭಿವೃದ್ಧಿಪಡಿಸಲು ಕಾರ್ಯ ಸಾಧ್ಯತಾ ವರದಿ.
 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಕಂದಾಯ ರೀ ಸರ್ವೇ.
 ಪಣಂಬೂರು ಮತ್ತು ಸಸಿಹಿತ್ಲು ಬೀಚ್ ಅಭಿವೃದ್ಧಿ ರೂ 7 ಕೋಟಿ ಅನುದಾನ.
 ತುಳು ಕೊಂಕಣಿ ಕೊಡವ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ಅನುದಾನ.
ದಕ್ಷಿಣ ಕನ್ನಡ ಜಿಲ್ಲೆಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಿದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯ ಮಂತ್ರಿಗಳಿಗೆ ಕೃತಜ್ಷತೆ ಸಲ್ಲಿಸುವುದಾಗಿ ಸಚಿವರು ತಿಳಿಸಿದ್ದಾರೆ.

Comments are closed.