ಕರಾವಳಿ

ಚಲಿಸುತ್ತಿದ್ದ ಬಸ್ಸಿನ ಮೇಲೆ ಬೃಹತ್ ಮರದ ರೆಂಬೆ ಬಿದ್ದು ಓರ್ವನಿಗೆ ಗಾಯ

Pinterest LinkedIn Tumblr

ಮಂಗಳೂರು, ಜನವರಿ. 28: ಚಲಿಸುತ್ತಿದ್ದ ಬಸ್ಸಿನ ಮೇಲೆ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರದ ಗೆಲ್ಲೊಂದು ಮುರಿದು ಬಿದ್ದು ಓರ್ವ ಗಾಯಗೊಂಡ ಘಟನೆ ನಗರದ ಹಂಪನಕಟ್ಟೆ ಸಿಗ್ನಲ್ ವೃತ್ತದ ಸಮೀಪ ಸೋಮವಾರ ನಡೆದಿದೆ.

ಮಂಗಳೂರಿನಿಂದ ಕಿನ್ನಿಗೋಳಿ-ಕಟೀಲು ಕಡೆಗೆ ತೆರಳುತ್ತಿದ್ದ ರಾಜರಾಜೇಶ್ವರಿ ಹೆಸರಿನ ಖಾಸಗಿ ಬಸ್ಸೊಂದು ಹಂಪನಕಟ್ಟೆಯ ಸಿಗ್ನಲ್ ವೃತ್ತದ ಸಮೀಪ ಪ್ರಯಾಣಿಕರನ್ನು ಹತ್ತಿಸುವ ಸಂದರ್ಭ ಅಲ್ಲೇ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರದ ಗೆಲ್ಲೊಂದು ಮುರಿದು ಬಸ್ಸಿನ ಮೇಲೆ ಬಿದ್ದಿದೆ.

ಈ ವೇಳೆ ಬಸ್ಸಿನಲ್ಲಿ ಹಲವಾರು ಮಂದಿ ಪ್ರಯಾಣಿಕರಿದ್ದು, ಯಾವೂದೇ ಹೆಚ್ಚಿನ ಅಪಾಯ ಸಂಭವಿಸಲಿಲ್ಲ. ಆದರೆ ಕಿಟಕಿ ಪಕ್ಕ ಕುಳಿತಿದ್ದ ಓರ್ವ ಪ್ರಯಾಣಿಕನಿಗೆ ಸ್ವಲ್ಪಮಟ್ಟಿನ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Comments are closed.