ಕರಾವಳಿ

ಈ ಹಿಂದೆ ಸಂಪೂರ್ಣ ಬೆಂಕಿಗಾಹುತಿಯಾದ ಮಂಗಳೂರಿನ ಅದೇ ಹೊಟೇಲ್‌ನಲ್ಲಿ ಮತ್ತೆ ಬೆಂಕಿ ಅವಘಡ

Pinterest LinkedIn Tumblr

ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ (ಜ್ಯೋತಿ ಟಾಕೀಸ್ ಬಳಿ) ಸಮೀಪವಿರುವ ಬಾರ್ ರೆಸ್ಟೋರೊಂದರಲ್ಲಿ ಇಂದು ಬೆಳಿಗ್ಗೆ ಬೆಂಕಿ‌ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಕೆಲವು ವರ್ಷಗಳ ಹಿಂದೆ ಉಂಟಾದ ಬೆಂಕಿ ಅವಘಡದಲ್ಲಿ ಸಂಪೂರ್ಣ ಬೆಂಕಿಗಾಹುತಿಯಾಗಿದ್ದ ನಗರದ ಜ್ಯೋತಿ ಟಾಕೀಸ್ ಬಳಿಯಿರುವ ಮಹಾರಾಜ ರೆಸಿಡೆನ್ಸಿಯಲ್ಲಿ ಇಂದು ಮುಂಜಾನೆ ಮತ್ತೊಮ್ಮೆ (ಎರಡನೇ ಬಾರಿ) ಬೆಂಕಿ ಅವಘಡ ಸಂಭವಿಸಿದೆ.

ರವಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೊಟೇಲ್‌ನ ಅಡುಗೆ ಕೋಣೆಯಲ್ಲಿರುವ ಚಿಮಿಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಹೋಟೆಲ್ ಕಾರ್ಮಿಕರು ಅಡುಗೆ ಕೋಣೆಯಿಂದ ಹೊರಗೆ ಬಂದಿದ್ದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದೆ.

ಬೆಂಕಿ‌ ಅನಾಹುತ ಸಂಭವಿಸಿದ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಅವಘಡಕ್ಕೆ ನಿರ್ಧಿಷ್ಟ ಕಾರಣ ತಿಳಿದು ಬಂದಿಲ್ಲ. ಸಂಬಂಧಪಟ್ಟ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.