ಕರಾವಳಿ

ಶೀರೂರು ಮೂಲಮಠಕ್ಕೆ ಯು.ಟಿ. ಖಾದರ್ ಭೇಟಿ; ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಸಚಿವ

Pinterest LinkedIn Tumblr

ಉಡುಪಿ : ಶಿರೂರು ಶ್ರೀಗಳು ವಿಧಿವಶವಾಗಿರುವುದು ನನಗೆ ಬಹಳಷ್ಟು ನೋವು ತಂದಿದೆ ಎಂದು ನಗರಭಿವೃದ್ದಿ ಸಚಿವ ಯುಟಿ ಖಾದರ್ ಶಿರೂರು ಶ್ರೀಗಳ ಸಾವಿಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು ಉಡುಪಿಯ ಹಿರಿಯಡ್ಕದಲ್ಲಿರುವ ಮೂಲ ಮಠಕ್ಕೆ ಬೇಟಿ ನೀಡಿ ಶಿರೂರು ಶ್ರೀಗಳ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ತುರ್ತು ಕೆಲಸವಿದ್ದ ಕಾರಣ ನಿನ್ನೆ ಶಿರೂರು ಶ್ರೀಗಳ ಅಂತ್ಯ ಕ್ರಿಯೆಗೆ ನನಗೆ ಬರಲು ಸಾದ್ಯವಾಗಿಲ್ಲ. ನನಗೂ ಶ್ರೀಗಳಿಗೂ ಮೊದಲಿನಿಂದಲೂ ಒಂದು ಉತ್ತಮ ಸ್ನೇಹ ಹಾಗೂ ಆತ್ಮೀತೆಯ ಸಮಬಂದವಿತ್ತು. ನಾವಿಬ್ಬರು ಸೋದರತೆಯಿಂದ ಇದ್ದೆವು. ನಾನು ಒಬ್ಬ ಮಂತ್ರಿಯಾಗಿ ಇವತ್ತು ಇಲ್ಲಿಗೆ ಬಂದಿಲ್ಲ. ಶ್ರೀಗಳ ಹಿತೈಷಿಯಾಗಿ ಇಲ್ಲಿಗೆ ಬಂದಿದ್ದೇನೆ. ಶ್ರೀಗಳ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತ ವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರ ಸೂಕ್ತ ತನಿಖೆ ನಡೆಸಲಿದೆ, ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

Comments are closed.