ಕರ್ನಾಟಕ

ಕೇರಳದ ಮೀರಾ ಜೊತೆ ಸಪ್ತಪದಿ ತುಳಿದ ಪ್ರಣವಾನಂದ ಸ್ವಾಮೀಜಿ

Pinterest LinkedIn Tumblr

pranavanda

ಕಲಬುರ್ಗಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಸೋಮವಾರ ಇಲ್ಲಿ ಕೇರಳದ ಮೀರಾ ಅವರೊಂದಿಗೆ ವಿವಾಹವಾದರು.

pranavanda

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹಾಗೂ ವಿವಿಧ ಮಠಗಳು ಸ್ವಾಮೀಜಿಗಳ ಸಮ್ಮುಖದಲ್ಲಿ ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿತು.

ಶ್ರೀರಾಮ ಸೇನೆಯ ಕಾರ್ಯಕರ್ತರು ವಿಭಾಗದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ದಾಸೋಹ ಚಾವಣಿಯ ಪ್ರತ್ಯೇಕ ಕೋಣೆಯಲ್ಲಿ ವೇದ ಮಂತ್ರ ಪಠಣದೊಂದಿಗೆ ಸ್ವಾಮೀಜಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು. ಶ್ರೀರಾಮ ಸೇನೆಯ ಕಾರ್ಯಕರ್ತರು ‘ಭಾರತ ಮಾತಾಕೀ ಜೈ’, ‘ಜೈ ಶ್ರೀರಾಮ’ ಘೋಷಣೆಗಳನ್ನು ಕೂಗಿದರು.(ಪ್ರಜಾವಾಣಿ )

Comments are closed.