ಕರ್ನಾಟಕ

ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್; ಚೇರ್ಮನ್ ರಾಕೇಶ್ ಮಲ್ಲಿ ನೇತೃತ್ವದ ತಂಡಕ್ಕೆ ಜಯಭೇರಿ,14 ಮಂದಿಯೂ ಆಯ್ಕೆ

Pinterest LinkedIn Tumblr

ಬೆಂಗಳೂರು: ಕಳೆದ ವರ್ಷ ಅಂದರೆ 7-12-2021ರಂದು ನಡೆದ ಕರ್ನಾಟಕ ಅಸೋಸಿಯೇಷನ್ (ರಿ) ಇದರ ರಾಜ್ಯ ಅಮೆಚೂರ್ ಪದಾಧಿಕಾರಿಗಳ ಚುನಾವಣೆಯ ನಡೆದಿದ್ದು, ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ನಿರ್ದೇಶಿಸಿದ ಮೇರೆಗೆ 2022 ಅ.21 ರಂದು ಮತ ಎಣಿಕೆ ಮಾಡಲಾಯಿತು‌.

ಈ ಹಿಂದೆಯೇ ಅವಿರೋಧವಾಗಿ‌ ಚೇರ್ಮನ್ ಆಗಿ ಆಯ್ಕೆಯಾಗಿರುವ ರಾಕೇಶ್ ಮಲ್ಲಿ‌ ಮತ್ತು ಇದೀಗ ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತೇಗೌಡ ಅವರ ನೇತೃತ್ವದ ತಂಡದ 14 ಮಂದಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಗಳಿಸಿದ್ದಾರೆ.

ಚುನಾವಣಾಧಿಕಾರಿ ಎಸ್. ಪವನ್ ಕುಮಾರ್‌ ಕರ್ತವ್ಯ ನಿರ್ವಹಿಸಿದ್ದಾರೆ.

Comments are closed.