ಕರಾವಳಿ

ರಾಜ್ಯಮಟ್ಟದ ಫವರ್ ಲಿಪ್ಟಿಂಗ್’ನಲ್ಲಿ ಸಾಧನೆ ಮಾಡಿದ ಕುವರಿಗೆ ಬಿಲ್ಲವ ಸಂಘಟನೆಯಿಂದ ಸನ್ಮಾನ..!

Pinterest LinkedIn Tumblr

ಕುಂದಾಪುರ: ಸಾಲಿಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸಬ್ ಜ್ಯೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಕೋಟೇಶ್ವರದ ಶೇಖರ ಪೂಜಾರಿ ಹಾಗೂ ಜಲಜ ಪೂಜಾರಿಯವರ ಪುತ್ರಿ ಸೌಜನ್ಯ ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದು ಮಾ.15ರಂದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಬಿಲ್ಲವ ಸಂಘದಿಂದ ಸನ್ಮಾನ…
ಸೌಜನ್ಯ ಪೂಜಾರಿಯವರ ಸಾಧನೆಯನ್ನು ಗಮನಿಸಿ ಬಿಲ್ಲವ ಸಂಘ ಕುಂದಾಪುರ ಹಾಗೂ ಶ್ರೀ ನಾರಾಯಣಗುರು ಯುವಕ ಮಂಡಲ ಅಭಿನಂದಿಸಿ ಪ್ರೋತ್ಸಾಹಧನವನ್ನು ನೀಡಿದೆ.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಟಿ.ಕೆ ಕೋಟ್ಯಾನ್, ರಾಜೇಶ್ ಕಡ್ಗಿಮನೆ ,ವಿಶ್ವನಾಥ ಗರಡಿಮನೆ,ಉಮೇಶ್ ಕಡ್ಗಿಮನೆ,ಯೋಗೇಶ್ ಕೋಡಿ,ಅಜಿತ್ ಪೂಜಾರಿ,ಪ್ರದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Comments are closed.