ಕ್ರೀಡೆ

ಭಾರತದ ವಿರುದ್ಧ ಸೋಲು ಕಂಡ ಪಾಕ್ ಆಟಗಾರರಿಗೆ ಕ್ರಿಕೆಟಿಗ ಶೋಯಬ್ ಅಖ್ತರ್ ಹೇಳಿದ್ದೇನು…?

Pinterest LinkedIn Tumblr

ಇಸ್ಲಾಮಾಬಾದ್: ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಕಿಚಾಯಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋಲಿಗೆ ಪಾಕ್ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇದರ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.

ವಾಘಾ ಗಡಿಯಲ್ಲಿ ಕಳೆದ ವರ್ಷ ಭಾರತ-ಪಾಕಿಸ್ತಾನ ಸೈನಿಕರ ಪರಸ್ಪರ ಧ್ವಜ ಗೌರವ ಸಲ್ಲಿಸುವ ವೇಳೆ ಪಾಕ್ ಸೈನಿಕರ ಮಧ್ಯೆ ಹೋಗಿ ಭಾರತೀಯ ಯೋಧರನ್ನು ಕಿಚಾಯಿಸುವಂತೆ ವರ್ತಿಸಿ, ತೊಡೆ ತಟ್ಟಿದ್ದರು.

ಉಭಯ ದೇಶಗಳ ಸೌಹಾರ್ದ ಕಾರ್ಯಕ್ರಮದಲ್ಲಿ ಹಸನ್ ಅಲಿ ತೋರಿದ ವರ್ತನೆಗೆ ವಿರೋಧ ವ್ಯಕ್ತವಾಗಿತ್ತು. ಟ್ವೀಟರ್ ನಲ್ಲಿ ವೈರಲ್ ಆಗಿದ್ದ ವಿಡಿಯೋಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.

Comments are closed.