ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2019 ಇಂಗ್ಲೆಂಡ್ ಸಾರಥ್ಯದಲ್ಲಿ ನಡೆಯುತ್ತಿದ್ದು, ಈಗಾಗಲೇ ತಂಡಗಳು ವಿಶ್ವಕಪ್ ಗೆಲ್ಲುವ ತವಕದಲ್ಲಿವೆ. ಇದರಲ್ಲಿ ಭಾರತ ಕೂಡ ಒಂದು. ಆದರೆ, ಭಾರತ ತಂಡಕ್ಕೆ ಸದ್ಯ ಆರಂಭಿಕ ಬ್ಯಾಟ್ಸ್ಮೆನ್ ಶಿಖರ್ ಧವನ್ಗೆ ಗಾಯದ ಸಮಸ್ಯೆಯಿಂದಾಗಿ 18 ದಿನಗಳ ಕಾಲ ವಿಶ್ರಾಂತಿ ನೀಡಲಾಗಿದೆ.
ಈಗ ಸದ್ಯ ಟೀಂ ಇಂಡಿಯಾ ಮುಂದೆ ಇರುವ ಚಾಲೆಂಜ್ ಏನು ಅಂದ್ರೆ ಶಿಖರ್ ಧವನ್ ಸ್ಥಾನ ತುಂಬಬಲ್ಲ ಆಟಗಾರರ ಯಾರು ಆತ ಅದನ್ನು ನಿಭಾಯಿಸಬಲ್ಲನಾ ಎಂಬ ಬಗ್ಗೆ ಯೋಚನೆ ಮಾಡುತ್ತಿದೆ. ಇನ್ನು ತಂಡಕ್ಕೆ ಇರೋದು 3 ಆಯ್ಕೆಗಳು ಅವುಗಳು ಈ ಕೆಳಗಿನಂತಿವೆ..
ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಎದುರಾಳಿ ತಂಡದ ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸುವಂತ ಮಾಧ್ಯಮ ಕ್ರಮಾಂಕದಲ್ಲಿ ಹಾಗೂ ಆರಂಭಿಕನಾಗು ಬ್ಯಾಟಿಂಗ್ ಮಾಡಬಲ್ಲ ರಿಷಬ್ ಪಂತ್ ಅವರನ್ನು ಬಿಸಿಸಿಐ ಆಯ್ಕೆ ಮಾಡಬಹುದು.
ಕಾರಣ ಬಿಸಿಸಿಐ ವಿಶ್ವಕಪ್ ತಂಡ ಪ್ರಕಟಿಸಿದ ಬಳಿಕ ಇವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆಗ ಭಾರತೀಯ ಕ್ರಿಕೆಟಿಗರು ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲ ಅರ್ಹತೆ ಹೊಂದಿದ್ದರು ಅವರನ್ನು ಕೈ ಬಿಟ್ಟಿದ್ದು ನಿರಾಶೆಯಾಗಿದೆ ಎಂಬ ಚರ್ಚೆ ನಡೆದಿತ್ತು.
ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಬಿಸಿಸಿಐ ಇವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಇದರ ಪ್ರತಿಫಲವಾಗಿ ಕರ್ನಾಟಕದ ಮಾಯಾಂಕ ಅಗರವಾಲ್ ಅವರು ಟೆಸ್ಟ್ನಲ್ಲಿ ಅರ್ಧಶತಕ ಸಿಡಿಸಿ ಬಿಸಿಸಿಐ ಆಯ್ಕೆ ಸಮಿತಿಗೆ ತಮ್ಮ ತಾಕತ್ ಪ್ರದರ್ಶನ ತೋರಿ ಅವರಿಂದ ಮೆಚ್ಚುಗೆ ಕೂಡ ಗಳಿಸಿದ್ದರು.
ಸದ್ಯ ಮಾಯಾಂಕ ಅಗರವಾಲ್ ಅವರು ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದು ಮೊದಲ 4 ಕ್ರಮಾಂಕ ವರೆಗೂ ಯಾವುದೇ ಕ್ರಮಾಂಕದಲ್ಲಿ ಆಡಲು ಬಲ್ಲ ಸಾಮರ್ಥ್ಯ ಇವರಿಗೆ ಇದೆ. ಬಿಸಿಸಿಐ ಆಯ್ಕೆ ಸಮಿತಿಗೆ ಇವರ ಮೇಲು ವಿಶ್ವಾಸವಿದೆ.
ಕರ್ನಾಟಕದ ಮತ್ತೊಬ್ಬ ಪ್ರತಿಭಾವಂತ ಆಟಗಾರ ಕೆ.ಎಲ್ ರಾಹುಲ್ ಸದ್ಯ ಇವರು ವಿಶ್ವಕಪ್ನಲ್ಲಿ ಸ್ಥಾನ ಪಡೆದು ಈಗ ಆಡಿರುವ ಎರಡು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇವರು ಸಹ ಮೊದಲ 4 ಆರಂಭಿಕ ಬ್ಯಾಟಿಂಗ್ನಲ್ಲಿ ಯಾವುದೇ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದರು ಅದನ್ನು ನಿಭಾಯಿಸುವ ವಿಶ್ವಾಸ ಇವರಲ್ಲಿದೆ.
ಅಲ್ಲದೇ ವಿದೇಶಿ ನೆಲೆದಲ್ಲಿ ಇವರ ಸ್ಟ್ರೇಕ್ ರೇಟ್ ಅತ್ಯುತ್ತಮವಾಗಿದ್ದ ಶಿಖರ್ ಧವನ್ ಸ್ಥಾನಕ್ಕೆ ಕೆ.ಎಲ್ ರಾಹುಲ್ ಬರುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ಇತ್ತೀಚಿಗೆ ನಡೆದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಹೆಚ್ಚು ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.
ಸದ್ಯ ಜೂನ್ 13ರಂದು ಭಾರತ ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವಕಪ್ ಪಂದ್ಯಕ್ಕೆ ಈ ಮೂವರಲ್ಲಿ ಯಾರು ಶಿಖರ್ ಧವನ್ ಸ್ಥಾನ ತುಂಬಬಲ್ಲರು ಎಂಬುದನ್ನು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿಲಿದೆ. ಅಲ್ಲಿತನಕ ಕ್ರಿಕೆಟ್ ಪ್ರೇಮಿಗಳು ಕಾಯಲೇ ಬೇಕು.
Comments are closed.