ನವದೆಹಲಿ: ಭಾರತ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಸಾರ್ವಕಾಲಿಕ ಅತೀ ಹೆಚ್ಚು ನೆನಪಿನಲ್ಲಿ ಇಡುವಂತ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಅವರು, ಇಂದು( ಸೋಮವಾರ) ಎಲ್ಲ ಮಾದರಿಯ ಕ್ರಿಕೆಟ್ಗೆ ಸ್ವಂ-ಪ್ರೇರಿತರಾಗಿ ಮಾಧ್ಯಮದ ಮುಂದೆ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಅವರು ತಮ್ಮ ವೃತ್ತಿ ಜೀವನದ ನಿರ್ಣಾಯಕ ಕ್ಷಣಗಳಲ್ಲಿ ಬೆಳಕು ಚೆಲ್ಲಿದರು ಸ್ಮರಣೆ ಮಾಡಿಕೊಂಡರು.
ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2011ರ ಭಾರತ ತಂಡದ ವಿಜಯದಲ್ಲಿ ಇವರ ಆಲ್ರೌಂಡರ್ ಆಗಿ ನಿರ್ವಹಿಸಿದ ಪಾತ್ರ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ಈ ಸಾಲಿನಲ್ಲಿ ಯುವರಾಜ್ ಸಿಂಗ್ ಅವರಿಗೆ ಮ್ಯಾನ್ ಆಫ್ ದಿ ಟೂರ್ನಾಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ವಿಶ್ವ ಟಿ-20 2007ರ ಭಾರತದ ತಂಡದ ವಿಜಯದಲ್ಲೂ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು.ಈ ಟೂರ್ನಿಯಲ್ಲಿ ಅವರು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾರ್ಡ್ ಎಸೆದ ಒಂದು ಓವರ್ನ ಎಲ್ಲ ಬಾಲ್ಗಳಿಗೆ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಶ್ವಾಶತ ಸ್ಥಾನ ಪಡೆದರು.
Comments are closed.