ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್ನಲ್ಲೇ ನಿಂತಿದ್ದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್ಮ್ಯಾನ್ ಗೇಮ್ಗೆ ಮೋಸ ಮಾಡಿದ್ದಾರೆ.
ಎರನಡೇ ಇನ್ನಿಂಗ್ಸ್ನಲ್ಲಿ 34ರನ್ ಗಳಿಸಿದ್ದ ಪೂಜಾರ ವಿನಯ್ ಕುಮಾರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಎಸ್. ಶರತ್ಗೆ ಕ್ಯಾಚ್ ನೀಡಿದ್ದರು. ಬ್ಯಾಟ್ಗೆ ಚೆಂಡು ತಾಗಿದ್ದು ಗೊತ್ತಿದ್ದರೂ ಪೂಜಾರ ಕ್ರೀಸ್ನಲ್ಲೇ ನಿಂತುಕೊಂಡರು. ಇನ್ನೂ ಅಂಪೈರ್ ಕೂಡ ಔಟ್ ತೀರ್ಪು ನೀಡದೆ ಇರುವುದು ಪೂಜಾರ ಮೋಸಾದಾಟಕ್ಕೆ ಸಾಥ್ ಕೊಡುವಂತಿತ್ತು.. ಅಂಪೈರ್ ಔಟ್ ಕೊಡದಿದ್ದಕ್ಕೆ ಕೋಪಗೊಂಡ ವಿನಯ್ ವಾಗ್ವಾದವನ್ನು ನಡೆಸಿದರು.
ಕ್ರೀಡೆ
Comments are closed.