ಇಂದೋರ್: ವಿದರ್ಭ ತಂಡದ ಆಟಗಾರನೊಬ್ಬ ಚೆಂಡು ತಗುಲಿ ಒದ್ದಾಡುತ್ತಿದ್ದರು ಎದುರಾಳಿ ದೆಹಲಿ ತಂಡದ ಆಟಗಾರರು ಸಹಾಯಕ್ಕೆ ಬಾರದೆ ಇದ್ದಿದ್ದನ್ನು ನೆಟಿಜನ್ಸ್ ಗಳು ಪ್ರಶ್ನಿಸಿದ್ದಾರೆ.
https://www.instagram.com/p/BdW_PpNlObq/
ಪ್ರಸಕ್ತ ಸಾಲಿನ ರಣಜಿ ಫೈನಲ್ ಪಂದ್ಯ ಇಂದೋರ್ ಕ್ರೀಡಾಂಗಣದಲ್ಲಿ ನಡೆದಿದ್ದು ದೆಹಲಿ ವಿರುದ್ಧ ವಿದರ್ಭ ತಂಡ ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಮಧ್ಯೆ ಪಂದ್ಯದಲ್ಲಿ ವಿದರ್ಭ ತಂಡದ ಬ್ಯಾಟ್ಸ್ ಮ್ಯಾನ್ ಗೆ ಬೌಲರ್ ಎಸೆದ ಚೆಂಡು ತಗುಲಿ ಕೆಳಗೆ ಬಿದ್ದು ನೋವಿನಿಂದ ನರಳುತ್ತಿದ್ದಾಗ ಮೈದಾನದಲ್ಲಿದ್ದ ದೆಹಲಿ ಆಟಗಾರರು ಆತನ ಹತ್ತಿರ ಸುಳಿಯದೆ ತಮ್ಮ ಪಾಡಿಗೆ ಸುಮ್ಮನಾಗಿದ್ದು ದೆಹಲಿ ತಂಡದ ಆಟಗಾರರ ಕ್ರೀಡಾ ಸ್ಪೂರ್ತಿ ಮರೆತು ನಡೆದುಕೊಂಡಿದ್ದಾರೆ ಎಂದು ನೆಟಿಜನ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದರ್ಭ ತಂಡದ ಬ್ಯಾಟ್ಸ್ ಮನ್ ನೋವಿನಿಂದ ನರಳುತ್ತಿದ್ದರು ಪಂದ್ಯದ ಅಂಪೈರ್ ಗಳು ಸಹ ಆತನ ಸಹಾಯಕ್ಕೆ ತೆರಳಲಿಲ್ಲ. ಅಲ್ಲದೆ ವಿದರ್ಭ ತಂಡದ ಮತ್ತೋರ್ವ ಬ್ಯಾಟ್ಸ್ ಮನ್ ಸಹ ಡ್ರೆಸ್ಸಿಂಗ್ ರೂಂ ಕಡೆಗೆ ಸನ್ನೆ ಮಾಡಿ ವೈದ್ಯಕೀಯ ನೆರವು ಯಾಚಿಸಿದರೇ ಹೊರತು ಬ್ಯಾಟ್ಸ್ ಮನ್ ಹತ್ತಿರಕ್ಕೂ ಹೋಗಲಿಲ್ಲ.
ಇದಕ್ಕೆ ಕ್ರೀಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯವರಿಂದ ಕ್ರೀಡಾ ಸ್ಫೂರ್ತಿಯನ್ನು ಕಲಿಯಿರಿ ಎಂದು ದೆಹಲಿ ಆಟಗಾರರಿಗೆ ಸಲಹೆ ನೀಡಿದ್ದಾರೆ.
ದುರ್ದೈವದ ಸಂಗತಿಯೆಂದರೆ ದೆಹಲಿ ತಂಡದಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ಗೌತಮ್ ಗಂಭೀರ್ ಹಾಗೂ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಸಹ ಇದ್ದರು.
Comments are closed.