ಕ್ರೀಡೆ

ನಿವೃತ್ತಿಯಾಗಿದ್ದರೂ ಧೋನಿ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದ ಪಿಚ್ ಪರೀಕ್ಷಿಸಿದ್ದು ಯಾಕೆ?

Pinterest LinkedIn Tumblr


ಕೋಲ್ಕೊತ್ತಾ: ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿ ಅದೆಷ್ಟೋ ಕಾಲವಾಗಿದೆ. ಹಾಗಿದ್ದರೂ ಭಾರತ ಮತ್ತು ಶ್ರೀಲಂಕಾ ನಡುವೆ ನ.16 ರಿಂದ ಟೆಸ್ಟ್ ಪಂದ್ಯ ನಡೆಯುವ ಈಡನ್ ಗಾರ್ಡನ್ ಮೈದಾನದ ಪಿಚ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಇಲ್ಲಿ ಮೊದಲ ಟೆಸ್ಟ್ ಪಂದ್ಯವಾಡಲಿದೆ. ಈ ತಂಡದಲ್ಲಿ ಧೋನಿ ಖಂಡಿತಾ ಇಲ್ಲ. ಹಾಗಿದ್ದರೂ ಅವರು ಪಂದ್ಯ ನಡೆಯುವ ಪಿಚ್ ಪರಿಶೀಲಿಸಿದ್ದಲ್ಲದೆ, ಕ್ಯುರೇಟರ್ ಸುಜನ್ ಮುಖರ್ಜಿ ಜತೆ ಚರ್ಚಿಸಿದ್ದಾರೆ.

ಅಸಲಿಗೆ ಧೋನಿ ಇಲ್ಲಿಗೆ ಬಂದಿದ್ದು ಕಪಿಲ್ ದೇವ್ ಜತೆಗೆ ಜಾಹೀರಾತೊಂದರ ಶೂಟಿಂಗ್ ಗಾಗಿ. ಈ ಸಂದರ್ಭದಲ್ಲಿ ಪಿಚ್ ತಯಾರಿ ಬಗ್ಗೆ ಕುತೂಹಲದಿಂದ ಕ್ಯುರೇಟರ್ ಜತೆ ಚರ್ಚಿಸಿದ ಧೋನಿ, ಪಿಚ್ ಪರಿಶೀಲನೆ ನಡೆಸಿದರು. ಎರಡು ವಿಶ್ವಕಪ್ ವಿಜೇತ ನಾಯಕರು ಇಲ್ಲಿ ಜಾಹೀರಾತು ಶೂಟಿಂಗ್ ನಡೆಸುವ ನೆಪದಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದರು. ನಂತರ ಇವರಿಗೆ ಇನ್ನೊಬ್ಬ ಮಾಜಿ ನಾಯಕ ಹಾಗೂ ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಸೌರವ್ ಗಂಗೂಲಿ ಜತೆಯಾದರು.

Comments are closed.