ಕ್ರೀಡೆ

ನನ್ನ ಧೋನಿ ನಡುವಿನ ಸ್ನೇಹ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ : ವಿರಾಟ್ ಕೊಹ್ಲಿ

Pinterest LinkedIn Tumblr

ನವದೆಹಲಿ: ನನ್ನ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ಸ್ನೇಹ-ಸಂಬಂಧವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಳಿ ಹೇಳಿದ್ದಾರೆ.

‘ಬ್ರೇಕ್‌ಫಾಸ್ಟ್‌ ವಿತ್‌ ಚಾಂಪಿಯನ್ಸ್‌’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನನ್ನ ಮತ್ತು ಮಹೇಂದ್ರ ಸಿಂಗ್ ಅವರ ನಡುವಿನ ಸ್ನೇಹ-ಸಂಬಂಧ ಅತ್ಯುತ್ತಮವಾಗಿದೆ. ಆದರೆ ನಮ್ಮ ಈ ಸಂಬಂಧವನ್ನು ಹಾಳುಮಾಡುವ ಪ್ರಯತ್ನ ಕೆಲವರಿಂದ ನಡೆದಿತ್ತು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನೇರವಾಗಿಯೇ ಕೆಲ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಕೊಹ್ಲಿ, “ಮಹೇಂದ್ರ ಸಿಂಗ್‌ ಧೋನಿ ಮತ್ತು ತಮ್ಮ ಮಧ್ಯೆ ಒಡಕು ಮೂಡಿಸಲು ಕೆಲವರು ಯತ್ನಿಸಿದ್ದರು. ನನ್ನ ಮತ್ತು ಧೋನಿ ಮಧ್ಯೆ ಒಡಕು ಮೂಡಿದೆ ಎಂದು ಕೆಲ ವ್ಯಕ್ತಿಗಳು ನಾನಾ ರೀತಿಯ ಲೇಖನಗಳನ್ನು ಪ್ರಕಟಿಸಿದ್ದರು. ಆದರೆ ನಾನಾಗಲೀ ಧೋನಿಯಾಗಲೀ ಅಂತಹ ಲೇಖನಗಳನ್ನು ಓದುವುದೇ ಇಲ್ಲ. ಇಂತಹ ಹಾಸ್ಯಾಸ್ಪದ ಸಂಗತಿಗಳನ್ನು ಕೇಳಿ ಸಾಕಷ್ಟು ಬಾರಿ ನಕ್ಕಿದ್ದೇವೆ. ನಮ್ಮನ್ನು ಜತೆಯಾಗಿ ನೋಡಿದಾಗಲೆಲ್ಲಾ ‘ಇವರ ನಡುವೆ ಯಾವುದೇ ಒಡಕಿಲ್ಲವೇ’ ಎಂದು ಅವರು ಅಚ್ಚರಿ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ “ನಮ್ಮಿಬ್ಬರ ನಡುವೆ ಅತ್ಯುತ್ತಮ ಬಾಂಧವ್ಯವಿದೆ ಎಂದು ಹೇಳಿರುವ ಕೊಹ್ಲಿ, ವಿಕೆಟ್‌ ಮಧ್ಯೆ ರನ್ ಓಡುವ ಸಂದರ್ಭಗಳಲ್ಲಿ ‘ಎರಡು ರನ್‌’ ಎಂದು ಧೋನಿ ಹೇಳಿದರೆ ನಾನು ಕಣ್ಣು ಮುಚ್ಚಿ ಓಡುತ್ತೇನೆ. ಏಕೆಂದರೆ ಅವರ ನಿರ್ಧಾರ, ಲೆಕ್ಕಾಚಾರ ಯಾವಾಗಲೂ ಸರಿಯಾಗಿಯೇ ಇರುತ್ತದೆ,” ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತ ತಂಡದಲ್ಲಿರುವ ಇಬ್ಬರು ತಮಾಷೆಯ ಮತ್ತು ನಿಗೂಢ ವ್ಯಕ್ತಿತ್ವಗಳು ಯಾರದು ಎಂದಾಗ ಕೊಹ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಶಿಖರ್ ಧವನ್ ಅವರ ಹೆಸರನ್ನು ಹೇಳಿದ್ದಾರೆ. ಅಂತೆಯೇ ಹಾರ್ದಿಕ್ ಪಾಂಡ್ಯಾ ಕುರಿತ ಕೆಲ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗ ಪಡಿಸಿದ ಕೊಹ್ಲಿ, ಹಾರ್ದಿಕ್ ರಂತಹ ವ್ಯಕ್ತಿ ತಂಡದಲ್ಲಿ ಮತ್ತೊಬ್ಬರಿಲ್ಲ. ಆತನ ಬಾಯಿಗೆ ಹಿಡಿತವೇ ಇರುವುದಿಲ್ಲ..ಮೈದಾನದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ನಗು ತರಿಸುತ್ತಾನೆ.. ಇತ್ತೀಚೆಗೆ ಆರ್.ಅಶ್ವಿನ್ ಕುರಿತಂತೆ “ರವಿ ಕಶ್ಯಪ್ ಅಶ್ವಿನ್ ಕ್ಯಾ ಬೌಲಿಂಗ್ ಕಾರ್ತಾ ಹೈ ಯಾರ್” ಎಂದು ಹೇಳಿದ್ದ..ಪಾಂಡ್ಯಾ ಪ್ರಕಾರ ರವಿಚಂದ್ರನ್ ಎಂದರೆ ರವಿಕಶ್ಯಪ್ ಎಂದು ಹೇಳಿದ್ದ. ಆತನ ಬಾಯಿಗೆ ಲಗಾಮಿಲ್ಲದೇ ಇರಬಹುದು ಆದರೆ ಆತನ ಮನಸ್ಸುಸಂಪೂರ್ಣ ನಿಷ್ಕಲ್ಮಶವಾದದ್ದು..ತನಗನ್ನಿಸಿದ್ದನ್ನು ನೇರವಾಗಿ ಹೇಳುತ್ತಾನೆ ಎಂದು ಕೊಹ್ಲಿ ಹೇಳಿದ್ದಾರೆ.

Comments are closed.