ಕ್ರೀಡೆ

ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಸಿರಾಜ್

Pinterest LinkedIn Tumblr


ರಾಜ್‌ಕೋಟ್: ಕಡು ಬಡತನದಿಂದ ಮೇಲೆದ್ದು ಬಂದಿರುವ ಉದಯೋನ್ಮುಖ ವೇಗಿ ಮೊಹಮ್ಮದ್ ಸಿರಾಜ್, ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊತ್ತ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ಪಾದಾರ್ಪಣಾ ಪಂದ್ಯದಲ್ಲಿ ಭಾರಿ ದುಬಾರಿಯೆನಿಸಿದರೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸಿದ ಸಿರಾಜ್ ಗಮನ ಸೆಳೆದಿದ್ದರು.

ತಂಡಕ್ಕೆ ಆಯ್ಕೆಯಾದ ಬಳಿಕ ಕೋಚ್ ರವಿಶಾಸ್ತ್ರಿ ಅವರಿಂದ ಕ್ಯಾಪ್ ಸ್ವೀಕರಿಸಿದ ಸಿರಾಜ್ ಪಂದ್ಯಕ್ಕೂ ಮೊದಲು ನಡೆದ ರಾಷ್ಟ್ರಗೀತೆ ಹಾಡುವ ವೇಳೆಯಲ್ಲಿ ಭಾವುಕರಾಗಿ ಕಂಡುಬಂದಿದ್ದರು.

ಪ್ರತಿಯೊಬ್ಬರಿಗೂ ಭಾರತದ ಪರ ಆಡುವುದು ಕನಸಾಗಿರುತ್ತದೆ. ಕೊನೆಗೂ ಬಾಲ್ಯ ಕಾಲದ ಕನಸು ನನಸಾಗಿರುವುದನ್ನು ತಡೆಯಲಾಗದ ಸಿರಾಜ್ ಆನಂದ ಬಾಶ್ಪವನ್ನು ಸುರಿಸಿದ್ದರು.

ಸಿರಾಜ್ ದೇಶಭಕ್ತಿಗೀಗ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೈದರಾಬಾದ್ ವೇಗಿ ಮತ್ತಷ್ಟು ಯಶ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.

Comments are closed.