ಕ್ರೀಡೆ

ತನ್ನ ನಿವೃತ್ತಿಯ ರಹಸ್ಯ ಬಿಚ್ಚಿಟ್ಟ ಮಹೇಂದ್ರ ಸಿಂಗ್ ಧೋನಿ

Pinterest LinkedIn Tumblr


ಪುಣೆ,ರಿ.೧೪-ಏಕದಿನ, ಟಿ-೨೦ ಮತ್ತು ಟೆಸ್ಟ್ ಮಾದರಿಯ ಕ್ರಿಕೆಟ್‌ನ ಮೂರು ಮಾದರಿಗಳ ತಂಡಕ್ಕೂ ಪ್ರತ್ಯೇಕ ನಾಯಕರಿರುವ ಪದ್ಧತಿ ಭಾರತೀಯ ಕ್ರಿಕೆಟ್‌ಗೆ ಸರಿ ಹೊಂದುವುದಿಲ್ಲ ಹೀಗಾಗಿ ನಾನು ಸೀಮಿತ ಓವರ್ ತಂಡದ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದುದ್ದಾಗಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಏಕದಿನ ಮತ್ತು ಟಿ೨೦, ಮತ್ತು ಟೆಸ್ಟ್ ಮಾದರಿಗೂ ಒಬ್ಬರೆ ನಾಯಕನಾದರೇ ತಂಡವನ್ನು ಉತ್ತಮವಾಗಿ ಮುನ್ನಡೆಸಬಹುದು ಎನ್ನುವ ಕಾರಣದಿಂದ ತಮ್ಮ ಪದತ್ಯಾಗ ಮಾಡಿದ್ದಾಗಿ ಹೇಳಿದ್ದಾರೆ.
ಈ ಹಿಂದೆಯೇ ನಾಯಕನ ಸ್ಥಾನದಿಂದ ಪದತ್ಯಾಗದ ನಿರ್ಧಾರ ತೆಗೆದುಕೊಂಡಿದ್ದೆ ಅದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ತಿಳಿಸಿದ್ದೆ. ಆದರೆ ಇದನ್ನು ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ನಾಯಕತ್ವ ತ್ಯಜಿಸಿದರೂ ನೂತನ ನಾಯಕನಾಗಿರುವ ವಿರಾಟ್ ಕೊಹ್ಲಿಗೆ ಸಲಹೆ ಸೂಚನೆಗಳನ್ನು ನೀಡುವ ಕೆಲಸ ಮುಂದುವರಿಸುತ್ತೇನೆ. ವಿಕೆಟ್ ಕೀಪರ್ ಯಾವಾಗಲೂ ತಂಡದ ಉಪನಾಯಕನಿದ್ದಂತೆ. ನಾಯಕನಿಗೆ ಏನು ಬೇಕು ಎಂಬುದರ ಬಗ್ಗೆ ನಾನು ಸದಾ ಗಮನವಿಡುತ್ತೇನೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿ ಅವರಿಂದ ತೆರವಾಗಿರುವ ಏಕದಿನ ಮತ್ತು ಟಿ-೨೦ ಕ್ರಿಕೆಟ್ ನಾಯಕನ ಪಟ್ಟ ನೀಡಲಾಗಿದೆ.

Comments are closed.