ಕ್ರೀಡೆ

ವಿವಾದಿತ ಟ್ವೀಟ್ ಮಾಡಿ ಅಳಿಸಿ ಹಾಕಿದ ಹರ್ಭಜನ್ ಸಿಂಗ್!

Pinterest LinkedIn Tumblr


ಮುಂಬೈ: ಹರ್ಭಜನ್ ಸಿಂಗ್ ಯಾವತ್ತೂ ನೇರ ನುಡಿಗೆ ಹೆಸರು ವಾಸಿ. ಪಿಚ್ ವಿಷಯದಲ್ಲಿ ಹಿಂದೊಮ್ಮೆ ಟೀಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಭಜಿ ಇದೀಗ ಆಯ್ಕೆ ಸಮಿತಿ ವಿರುದ್ಧವೇ ಟೀಕೆ ಮಾಡುವ ಟ್ವೀಟ್ ಮಾಡಿ ವಿವಾದವಾಗುವ ಲಕ್ಷಣವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.

ನಿನ್ನೆಯಷ್ಟೇ ಇಂಗ್ಲೆಂಡ್ ಸರಣಿಗೆ ಘೋಷಿಸಲಾದ ತಂಡದಲ್ಲಿ ಟೆಸ್ಟ್ ನಲ್ಲಿ ತ್ರಿಶತಕ ಭಾರಿಸಿದ್ದ ಕರುಣ್ ನಾಯರ್ ಹೆಸರಿಲ್ಲದಿದ್ದಕ್ಕೆ ಭಜಿ ಆಯ್ಕೆ ಸಮಿತಿಯನ್ನು ಲೇವಡಿ ಮಾಡುವಂತಹ ಟ್ವೀಟ್ ಮಾಡಿದ್ದರು. “ಎಲ್ಲಿ ಕರುಣ್ ನಾಯರ್? ಇಂಗ್ಲೆಂಡ್ ವಿರುದ್ಧ ಈಗಷ್ಟೇ ತ್ರಿಶತಕ ಭಾರಿಸಿದಾತ.. ಏಕದಿನ ಸರಣಿ ಬಿಡಿ. ಅಭ್ಯಾಸ ಪಂದ್ಯದಲ್ಲೂ ಆತನ ಹೆಸರು ಕಾಣುತ್ತಿಲ್ಲವಲ್ಲ? ಕಮಾಲ್…” ಎಂದು ಟ್ವೀಟ್ ಮಾಡಿದ್ದರು.

ಇದು ವಿವಾದವಾಗುವ ಲಕ್ಷಣ ಕಾಣುತ್ತಿದ್ದಂತೆ ತಕ್ಷಣ ಅದನ್ನು ಡಿಲೀಟ್ ಮಾಡಿದರು. ಆದರೆ ಆಗಲೇ ಆ ಟ್ವೀಟ್ ನನ್ನು 44 ಜನ ರಿಟ್ವೀಟ್ ಮಾಡಿದ್ದರು. ಹಿರಿಯ ಸ್ಪಿನ್ನರ್ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದಿಲ್ಲ. ರಣಜಿ ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಆದರೂ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ. ಬಹುಶಃ ಈ ಅಸಮಧಾನವನ್ನು ಈ ರೀತಿ ಹೊರ ಹಾಕುತ್ತಿರಬೇಕು.

Comments are closed.