ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಮಿಡಲ್ ವೀಕ್ ಔಟ್ ಆದ ಚಕ್ರವರ್ತಿ ಚಂದ್ರಚೂಡ್ ! ಕಾರಣವೇನು ಗೊತ್ತೇ ?

Pinterest LinkedIn Tumblr

ಬಿಗ್ ಬಾಸ್ ಕನ್ನಡ ಸೀಸನ್ 8ರ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೂಲಗಳ ಪ್ರಕಾರ, ಆಗಸ್ಟ್‌ 8ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿದ್ದ 9 ಮಂದಿಯಲ್ಲಿ ಐವರು ನಾಮಿನೇಟ್ ಆಗಿದ್ದರು. ಅದರಲ್ಲೀಗ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಪಡೆದಿದ್ದ ಚಕ್ರವರ್ತಿ, ಇದೀಗ ಆಟ ಮುಗಿಸಿ ಮನೆಯಿಂದ ಹೊರನಡೆದಿದ್ದಾರೆ.

ಈ ಸೀಸನ್‌ನ ಎಲ್ಲ ಸ್ಪರ್ಧಿಗಳು ಭಾನುವಾರದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್‌ನಲ್ಲಿ ಎಲಿಮಿನೇಟ್ ಆಗುತ್ತಿದ್ದರು. ಹಾಗೇ ಹೊರಬಂದ ಸ್ಪರ್ಧಿಯು ಕಿಚ್ಚ ಸುದೀಪ್‌ ಅವರ ಜೊತೆಗೆ ವೇದಿಕೆ ಮೇಲೆ ಕಾಣಿಸಿಕೊಂಡು, ಅಭಿಪ್ರಾಯ ಹಂಚಿಕೊಂಡು, ಶೋನಿಂದ ಹೊರಹೋಗುತ್ತಿದ್ದರು. ಆದರೆ, ಈ ಬಾರಿ ಆ ಥರದ ಪ್ರಕ್ರಿಯೆ ಇರುವುದಿಲ್ಲ ಎಂದು ಮೊದಲೇ ತಿಳಿಸಲಾಗಿತ್ತು. ಐವರು ನಾಮಿನೇಟ್ ಆಗಿದ್ದರು. ಅವರನ್ನು ಭಾನುವಾರ ಎಲಿಮಿನೇಟ್ ಮಾಡದೇ, ಮಿಡಲ್ ವೀಕ್ ಎಲಿಮಿನೇಷನ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಅಂತೆಯೇ ಮಂಗಳವಾರ ಚಕ್ರವರ್ತಿ ಎಲಿಮಿನೇಷನ್ ಆಗಿದೆ.

ಈ ವಾರ ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ, ದಿವ್ಯಾ ಉರುಡುಗ ಮತ್ತು ಚಕ್ರವರ್ತಿ ಚಂದ್ರಚೂಡ್‌ ನಾಮಿನೇಟ್ ಆಗಿದ್ದರು. ಕೊನೆಗೆ ಚಕ್ರವರ್ತಿ ಎಲಿಮಿನೇಟ್ ಆಗಿದ್ದಾರೆ. ಪ್ರಶಾಂತ್, ಶಮಂತ್ ಅವರಿಗಂತೂ ಎಲಿಮಿನೇಟ್ ಆಗುವ ಬಗ್ಗೆ ತುಂಬ ಆತಂಕ ಕಾಡುತ್ತಿತ್ತು ಅನ್ನೋದು ಅವರ ಮುಖಭಾವದಿಂದಲೇ ತಿಳಿಸಿಯುತ್ತಿತ್ತು. ಇನ್ನು, ಈ ಮೊದಲೇ ಕಿಚ್ಚ ಸುದೀಪ್ ಒಂದು ಮಾತು ಹೇಳಿದ್ದರು. ‘ನಾಮಿನೇಟ್ ಆಗಿರುವ ಪ್ರಶಾಂತ್ ಸಂಬರಗಿ, ಶಮಂತ್ ಬ್ರೊ ಗೌಡ, ಶುಭಾ ಪೂಂಜಾ, ದಿವ್ಯಾ, ಚಕ್ರವರ್ತಿ ಅವರೇ ಪ್ರತಿಕ್ಷಣವನ್ನು ಉಪಯೋಗಿಸಿಕೊಳ್ಳಿ, ಪ್ರತಿಕ್ಷಣವನ್ನು ನಿಮ್ಮ ಕ್ಷಣವನ್ನಾಗಿ ಮಾಡಿಕೊಳ್ಳಿ. ಹಾಗೇ ಎಲಿಮಿನೇಟ್ ಆಗುವ ಸ್ಪರ್ಧಿಗೆ ನಾನು ವೇದಿಕೆ ಮೇಲೆ ಸಿಗುವುದಿಲ್ಲ ಅನ್ನೋ ಬೇಜಾರಂತೂ ನನಗೆ ಇದೆ’ ಎಂದು ಸುದೀಪ್ ಹೇಳಿದ್ದರು. ಅಂತೆಯೇ ಚಕ್ರವರ್ತಿ ಅವರು ಅಂತಿಮವಾಗಿ ಸುದೀಪ್ ಅವರನ್ನು ವೇದಿಕೆ ಮೇಲೆ ಭೇಟಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ಪದೇಪದೇ ‘ಬಿಗ್ ಬಾಸ್’ ಮನೆಯಲ್ಲಿ ಹೇಳುತ್ತಿದ್ದ ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಅಶ್ಲೀಲ ಸನ್ನೆ ಮಾಡಿ ತೋರಿಸಿದ್ದು ವೀಕ್ಷಕರಿಗೆ ಕೋಪ ತರಿಸಿತ್ತು. ಹಾಗಾಗಿಯೇ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲೂ ಇದರ ಬಗ್ಗೆ ದೊಡ್ಡ ಚರ್ಚೆ ಆಗಿತ್ತು. ಈ ನಡುವೆ ಮನೆಯೊಳಗೆ ಇರುವಾಗಲೇ ತಮ್ಮ ನಡವಳಿಕೆ ಬಗ್ಗೆ ಚಕ್ರವರ್ತಿ ಕ್ಷಮೆ ಕೇಳಿದ್ದರು. ‘ಪ್ರೀತಿಯಿಂದ ಅಭಿಮಾನದಿಂದ, ಸ್ನೇಹದಿಂದ ನೋಡಿಕೊಂಡ ಆ ಹುಡುಗಿಗೆ ಈ ಒಂದು ವೇದಿಕೆಯಲ್ಲಿ ಆ ರೀತಿ ಸನ್ನೆ ಮಾಡಬಾರದಿತ್ತು. ಏಕೆಂದರೆ ನನ್ನ ಗುಣ ಅಲ್ಲ ಅದು, ಎಮೋಷನಲ್ ಆಗ್ತೀನಿ, ಸ್ವಲ್ಪ ಸಿಟ್ಟು ಬರತ್ತೆ, ಅದಕ್ಕಾಗಿ ನಾನು ನಿಮ್ಮ ಬಳಿ ಕ್ಷಮೆ ಕೇಳುವೆ. ಕೆಟ್ಟದಾಗಿ ಕಾಣಿಸ್ತು, ಹಾಗೆ ಮಾಡಬಾರದಿತ್ತು ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ, ಆ ಸಿಟ್ಟಿನಲ್ಲಿ ಮಾಡಿದೆ. ಹೀಗಾಗಿ ನಾನು ನಿಮ್ಮ ಬಳಿ ಶಿರಬಾಗಿ ಕ್ಷಮೆ ಕೇಳುವೆ, ದಯವಿಟ್ಟು ಕ್ಷಮಿಸಿ’ ಎಂದು ಚಕ್ರವರ್ತಿ ಕ್ಯಾಮೆರಾ ಮುಂದೆ ಬಂತು ಕ್ಷಮೆ ಕೇಳಿದ್ದರು.

Comments are closed.