ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಹೊಸ ಕಥೆ, ವಿಭಿನ್ನ ಪಾತ್ರಗಳ ಮೂಲಕ ಸಿನಿಮಾ ಮಾಡುತ್ತಾ, ನಟಿಸುತ್ತಾ ಬಂದಿದ್ದಾರೆ. ಸದ್ಯ ಲಾಕ್ಡೌನ್ ಸಮಯವನ್ನು ತಮ್ಮ ಮುಂದಿನ ರುದ್ರಪ್ರಯಾಗ ಸಿನಿಮಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಮುಗಿದಂತೆ ಸಿನಿಮಾ ಶೂಟಿಂಗ್ ಮಾಡಲು ಶೆಟ್ರು ತಯಾರಿ ನಡೆಸಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಅಂಡರ್ವರ್ಲ್ಡ್ನತ್ತ ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಅಂದಹಾಗೇ, ರಿಷಬ್ ಅಂಡರ್ವರ್ಲ್ಡ್ ಕಥೆ ಆಧಾರಿತ ಸಿನಿಮಾವೊಂದರಲ್ಲಿ ನಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂಡರ್ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರದಲ್ಲಿ ಶೆಟ್ರು ಬಣ್ಣ ಹಚ್ಚಲಿದ್ದಾರೆ. ಇದು 1980-90ರ ನಡುವಿನ ಘಟನಾವಳಿಯ ಕುರಿತ ಸಿನಿಮಾವಾಗಿದ್ದು, ಅದಕ್ಕಾಗಿ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಅದಕ್ಕಾಗಿ ನಿತೇಶ್ ಇವರಿಗೆ ಸಹಾಯ ಮಾಡುತ್ತಿದ್ದಾರೆ.
ರಿಷಬ್ ‘ಬೆಲ್ ಬಾಟಂ‘ ಸಿನಿಮಾದಲ್ಲಿ ಡಿಟೆಕ್ವಿಟ್ ದಿವಾಕರ್ರಾಗಿ ಬಣ್ಣ ಹಚ್ಚಿದ್ದರು. ಆದರೀಗ ಅಂಡರ್ವರ್ಲ್ಡ್ ಅಮರ್ ಪಾತ್ರಕ್ಕೆ ಧುಮುಕಲಿದ್ದಾರೆ. ಹೊಸ ಪಾತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಹವಾ ಎಬ್ಬಿಸಲು ಶೆಟ್ರು ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಸಿನಿಮಾ ಯಾರು ನಿರ್ಮಾಣ ಮಾಡುತ್ತಿದ್ದಾರೆ? ನಿರ್ದೇಶನ, ಕ್ಯಾಮೆರಾ ಯಾರು?ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಸದ್ಯ ರಿಷಭ್ ‘ರುದ್ರ ಪ್ರಯಾಗ‘ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಬೆಲ್ಬಾಟಂ 2, ಹರಿಕಥೆ ಗಿರಿಕಥೆ ಸಿನಿಮಾ ಕೂಡ ಅವರ ಕೈಯಲ್ಲಿದೆ. ಆದರೆ ಅಮರ್ ಆಳ್ವಾ ಕುರಿತಾಗಿ ಮೂಡಿಬರುವ ಸಿನಿಮಾ 2021ಕ್ಕೆ ಸೆಟ್ಟೇರಲಿದೆ.
ಭೂಗತ ಲೋಕವನ್ನು ಆಳಿದವರಲ್ಲಿ ಅಮರ್ ಆಳ್ವ ಕೂಡ ಒಬ್ಬರು. ಮೂಲತಃ ಮಂಗಳೂರಿನವರು. ಮುತ್ತಪ್ಪ ರೈ, ಜಯರಾಜ್, ಆಯಿಲ್ ಕುಮಾರ್ರಂತೆ ಅಮರ್ ಆಳ್ವ ಕೂಡ ಹಿಂದೊಮ್ಮೆ ಭೂಗತ ಲೋಕದಲ್ಲಿ ಸದ್ದು ಮಾಡಿದ್ದರು. ಆದರೆ 1992ರಲ್ಲಿ ಅವರನ್ನು ಕೊಲ್ಲಲಾಯಿತು.
Comments are closed.