ಮುಂಬೈ : ಬಾಲಿವುಡ್ನಟರಾದ ಅಮೀರ್ಖಾನ್, ಸಲ್ಮಾನ್ಖಾನ್ಮತ್ತು ಅಕ್ಷಯ್ಕುಮಾರ್ಅವರು ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ‘ಯೋಧರಿಗೆ ಸಂದೇಶ’ ಅಭಿಯಾನಕ್ಕೆ ಮೂವರೂ ನಟರು ಕೈಜೋಡಿಸಿದ್ದಾರೆ.
‘ದೇಶದ 125 ಕೋಟಿ ಜನರು ಯೋಧರಿಗೆ ದೀಪಾವಳಿ ಸಂದೇಶ ಕಳುಹಿಸುವ ಮೂಲಕ ಬೆಂಬಲ ಸೂಚಿಸಬೇಕು ಎನ್ನುವ ಪ್ರಧಾನಿ ಮೋದಿ ಅವರ ಆಶಯ ಸರಿಯಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ನಟ ಅಮೀರ್ಟ್ವೀಟ್ಮಾಡಿದ್ದಾರೆ. ‘ಭಾರತದ ಯೋಧರಿಗೆ ನನ್ನ ಕಡೆಯಿಂದ ದೀಪಾವಳಿ ಶುಭಾಶಯಗಳು’ ಎಂದು ಸಲ್ಮಾನ್ಖಾನ್ಹೇಳಿದ್ದರೆ, ‘ನಿಮ್ಮ ತ್ಯಾಗದ ಕಾರಣ ನಾವು ಸುರಕ್ಷಿತರಾಗಿದ್ದೇವೆ. ಈ ಹಬ್ಬವನ್ನು ನಿಮಗೆ ಸಮರ್ಪಿಸುತ್ತೇನೆ’ ಎಂದು ಅಕ್ಷಯ್ಕುಮಾರ್ತಿಳಿಸಿದ್ದಾರೆ.
Comments are closed.