ಮನೋರಂಜನೆ

ಮಿನುಗು ತಾರೆ ಕಲ್ಪನಾ ಆತ್ಮ ಪ್ರತ್ಯಕ್ಷ ಬರೇ ವದಂತಿ! ಏನಿದು ಘಟನೆ?

Pinterest LinkedIn Tumblr

kalpana-vaarteಬೆಳಗಾವಿ: ಕನ್ನಡ ಚಿತ್ರರಂಗದ ಮಿನುಗತಾರೆ ಎಂದೇ ಖ್ಯಾತಿ ಗಳಿಸಿದ್ದ ಕಲ್ಪನಾ ಆತ್ಮ ಪ್ರತಿ ಅಮವಾಸ್ಯೆ ದಿನದಂದು ಪ್ರತ್ಯಕ್ಷವಾಗುತ್ತದೆ ಎಂಬ ವದಂತಿ ಹಬ್ಬುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಗೋಟೂರು ಗ್ರಾಮಸ್ಥರು ಪ್ರತಿಕ್ರಿಯೆ ನೀಡಿರುವ ಘಟನೆ ನಡೆದಿದೆ.

1979ರಲ್ಲಿ ಬೆಳಗಾವಿಯ ಹುಕ್ಕೇರಿ ತಾಲೂಕಿನ ಗೋಟೂರು ಐಬಿ(ಪ್ರವಾಸಿಬಂಗ್ಲೆ)ಯಲ್ಲಿ ಮಿನುಗುತಾರೆ ಕಲ್ಪನಾ ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತೀಚೆಗೆ ಅಮಾವಾಸ್ಯೆ ದಿನದಂದು ಗೋಟೂರಿನಲ್ಲಿ ಕಲ್ಪನಾ ಆತ್ಮ ಪ್ರತ್ಯಕ್ಷವಾಗುತ್ತಿದೆ ಎಂದು ವದಂತಿ ಹರಿದಾಡುತ್ತಿದೆ.

ಆ ಹಿನ್ನೆಲೆಯಲ್ಲಿ ಗೋಟೂರು ಗ್ರಾಮದ ಮುಖಂಡ ಶಿವಗೊಂಡ ಅವರು ಟಿವಿ9 ಜೊತೆಗೆ ಮಾತನಾಡಿ, ಗೋಟೂರು ಐಬಿಯ ಸುತ್ತಮುತ್ತ ಮಿನುಗುತಾರೆ ಕಲ್ಪನಾ ಆತ್ಮ ಪ್ರತ್ಯಕ್ಷವಾಗುತ್ತಿದೆ ಎಂಬ ಸುದ್ದಿ ಸುಳ್ಳು. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
-ಉದಯವಾಣಿ

Write A Comment