ಬೆಂಗಳೂರು: ಕನ್ನಡ ಸಿನಿಮಾಕ್ಕೆ ಪುಟ್ಟಣ್ಣ ಹೆಸರಿಡೋ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಪುಟ್ಟಣ್ಣ ಹೆಸರಿನ ಬಗ್ಗೆ ವಿವಾದ ಮಾಡ್ತಿರೋರಿಗೆ ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬದ ನೆನಪಿಲ್ಲ. ಪುಟ್ಟಣ್ಣ ಹುಟ್ಟುಹಬ್ಬ ಆಚರಿಸಬೇಕು ಅನ್ನೋದು ಗೊತ್ತಿಲ್ಲ. ಅವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದವರಿಗೆ ನಾವು ಬದುಕಿರೋದೆ ಗೊತ್ತಿಲ್ಲ. ಆದರೆ ಇಂತಹ ವಿವಾದ ಮಾಡಲು ಮಾತ್ರ ಮುಂದೆ ಬರುತ್ತಾರೆ…ಇದು ಕನ್ನಡದ ಖ್ಯಾತ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ ಅವರ ಆಕ್ರೋಶದ ನುಡಿ.
ಬುಧವಾರ ಪುಟ್ಟಣ್ಣ ಸಿನಿಮಾ ಟೈಟಲ್ ಕುರಿತ ಎದ್ದ ವಿವಾದದ ಕುರಿತು ಪ್ರತಿಕ್ರಿಯಿಸಿರುವ ನಾಗಲಕ್ಷ್ಮಿ ಅವರು, ಪುಟ್ಟಣ್ಣ ಕಣಗಾಲ್ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮಾಡುತ್ತಾರೆ. ಆದರೆ ನಮ್ಮ ಮನೆಗೆ ಒಂದು ಆಮಂತ್ರಣ ಪತ್ರಿಕೆಯನ್ನೂ ಕಳುಹಿಸುವುದಿಲ್ಲ. ನಮ್ಮ ಮೇಲೆ ಯಾವ ಸೌಜನ್ಯವನ್ನೂ ಇಟ್ಟಿಲ್ಲ. ಹಾಗಾಗಿ ಅನಾವಶ್ಯಕವಾಗಿ ಅವರ ಹೆಸರಿನಲ್ಲಿ ವಿವಾದ ಮಾಡೋದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದರು. ಪುಟ್ಟಣ್ಣ ಕಣಗಾಲ್ ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.
-ಉದಯವಾಣಿ