ಕರ್ನಾಟಕ

ಕೊರೋನಾ ಹಿನ್ನೆಲೆ ಉದ್ಯೋಗ ಸಮಸ್ಯೆ: ಬಡತನಕ್ಕೆ ಬಲಿಯಾದ ಸೋದರರು

Pinterest LinkedIn Tumblr

ಮೈಸೂರು: ಮನೆಯಲ್ಲಿ ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ ಶರಣಾದ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಅಣ್ಣ ಸಿದ್ದರಾಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಸಾವಿನ ಸುದ್ದಿ ತಿಳಿದು ಕ್ರಿಮಿನಾಶಕ ಸೇವಿಸಿ ತಮ್ಮ‌ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ನಾಗರಾಜು ವಿಷ ಸೇವನೆ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದು ಕುಟುಂಬ ನಿರ್ವಹಣೆಯ ಸಮಸ್ಯೆಗೆ ತುತ್ತಾಗಿ ಈ ನಿರ್ಧಾರಕ್ಕೆ ಸೋದರರು ಬಂದಿದ್ದಾರೆ ಎನ್ನಲಾಗಿದೆ. ಕೊರೋನಾ ಮಹಾಮಾರಿ ಹಿನ್ನೆಲೆ ಉದ್ಯೊಗವು ಇಲ್ಲದಂತಾಗಿದೆ. ಈ ನಡುವೆ ಅಣ್ಣನ ಸಾವಿನ ಬಳಿಕ ಸಂಭವಿಸಿದ ತಮ್ಮನ ಸಾವು ಕುಟುಂಬವನ್ನು ಇನ್ನಷ್ಟು ಕಂಗೆಡಿಸಿ ದಿಕ್ಕು ತೊಚದಂತೆ ಮಾಡಿದೆ‌.

 

Comments are closed.