ಕರ್ನಾಟಕ

ಅಕ್ಕಿಆಲೂರು: ಆತಂಕ ಮೂಡಿಸಿದ ತಮಿಳುನಾಡು ಸೋಂಕಿತನ ಟ್ರಾವೆಲ್‌ ಹಿಸ್ಟರಿ

Pinterest LinkedIn Tumblr


ಅಕ್ಕಿಆಲೂರು: ತಮಿಳುನಾಡಿನ ಕೊರೊನಾ ಸೋಂಕಿತ ಲಾರಿ ಚಾಲಕನೊಬ್ಬನ ಟ್ರಾವೆಲ್‌ ಹಿಸ್ಟರಿ ಆಧರಿಸಿ ಅಕ್ಕಿಆಲೂರು ಹಾಗೂ ಬಾಳಂಬೀಡದ ಒಟ್ಟು 20 ಜನರನ್ನು ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಿದ್ದು, ತಾಲೂಕಿನಲ್ಲಿ ತಳಮಳ ಸೃಷ್ಟಿಸಿದೆ.

ಏ.30 ರಂದು ತಮಿಳುನಾಡಿನಿಂದ ಬಾಳಂಬೀಡಕ್ಕೆ ಬಂದಿದ್ದ ಚಾಲಕ ಲಾರಿಯಲ್ಲಿ ಭತ್ತ ತುಂಬಿಸಿಕೊಂಡು ತೆರಳಿದ್ದ. ಇದೀಗ ಆ ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಲಾರಿ ಲೋಡ್‌ ಮಾಡಿದ್ದ ಅಕ್ಕಿಆಲೂರು ಹಾಗೂ ಬಾಳಂಬೀಡದ ಹಮಾಲರು ಸೇರಿದಂತೆ ಅವರ ಕುಟುಂಬ ಸದಸ್ಯರನ್ನೆಲ್ಲ ಇಲ್ಲಿನ ಬಿಸಿಎಂ ವಸತಿ ನಿಲಯದಲ್ಲಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇವರೆಲ್ಲರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ ವರದಿ ಬರಲಿದೆ.

ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್‌. ನೇತೃತ್ವದಲ್ಲಿಕಂದಾಯ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಅಕ್ಕಿಆಲೂರು ಮತ್ತು ಬಾಳಂಬೀಡಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ. ಕ್ವಾರಂಟೈನ್‌ಗೆ ಒಳಗಾದವರ ಮನೆ ಸುತ್ತಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

ಸೋಂಕಿತನ ಓಡಾಟದಿಂದ ಟೆನ್ಶನ್‌:
ಶಿಗ್ಗಾಂವಿ ತಾಲೂಕಿನ ಅಂದಲಗಿಯ ಮಾವಿನ ಹಣ್ಣಿನ ವ್ಯಾಪಾರಿಯೊಬ್ಬನಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಈತನ ಟ್ರಾವೆಲ್‌ ಹಿಸ್ಟರಿ ಹಾನಗಲ್‌ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಾನಗಲ್‌ ತಾಲೂಕಿನಲ್ಲಿ ಮಾವಿನ ಬೆಳೆ ಪ್ರದೇಶ ಹೆಚ್ಚಿದ್ದು, ಈತ ಶಿಗ್ಗಾಂವಿಗಿಂತಲೂ ಹಾನಗಲ್‌ ತಾಲೂಕಿನಲ್ಲಿಯೇ ಹೆಚ್ಚು ಸಂಪರ್ಕ ಹೊಂದಿದ್ದು, ಕೊಪ್ಪರಸಿಕೊಪ್ಪ, ಬೈಲವಾಳ, ಆರೆಗೊಪ್ಪ, ಶಿರಗೋಡ, ಗಿರಿಸಿನಕೊಪ್ಪ, ಯಳ್ಳೂರು, ಯಳವಟ್ಟಿ ಗ್ರಾಮಗಳಲ್ಲಿ ಓಡಾಡಿದ್ದಾನೆ. ಜಿಲ್ಲೆಯಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ.

Comments are closed.