ಕರ್ನಾಟಕ

ಎಚ್​ಐವಿ ಸೋಂಕಿದೆ ಎಂದು ಹೇಳಿ ಮದುವೆ ನಿಲ್ಲಿಸಲು ನಾಟಕವಾಡಿ ಕೊನೆಗೂ ಸಿಕ್ಕಿಬಿದ್ದ ವರ ! ಮುಂದೆ ಏನಾಯಿತು ನೋಡಿ….

Pinterest LinkedIn Tumblr

ಬೆಂಗಳೂರು: ಮದುವೆಗೆ ಇನ್ನೇನು ಮೂರು ದಿನ ಬಾಕಿ ಇದೆ ಎನ್ನುವಾಗ ಮದುವೆಯಿಂದ ತಪ್ಪಿಸಿಕೊಳ್ಳಲು ತನಗೆ ಎಚ್​ಐವಿ ಸೋಂಕಿದೆ ಎಂದು ವರ ನಾಟಕ ಮಾಡಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಕಿರಣ್​ ಸುಳ್ಳು ಹೇಳಿ ಸಿಕ್ಕಿಬಿದ್ದ ವರ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಕಿರಣ್​ ಮದುವೆಯನ್ನು ಡಿಸೆಂಬರ್​ 1ರಂದು ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು. ವಧುವಿನ ಮನೆಯವರು ಕೂಡ ಅದ್ಧೂರಿಯಾಗಿ ಮಗಳ ಮದುವೆ ಮಾಡಲು ನಿರ್ಧರಿಸಿ, ಇದಕ್ಕಾಗಿ 15 ಲಕ್ಷ ವ್ಯಯಿಸಿದ್ದರು.

ಇನ್ನೇನು ಮದುವೆಗೆ 3 ದಿನ ಇದೆ ಎನ್ನುವಾಗ ಕಿರಣ್​, ನನಗೆ ಎಚ್​ಐವಿ ಸೋಂಕಿದೆ. ಮದುವೆ ನಿಲ್ಲಿಸುವಂತೆ ಯುವತಿಗೆ ತಿಳಿಸಿದ್ದಾನೆ. ವರನ ಮಾತು ಕೇಳಿ ತಬ್ಬಿಬ್ಬುಕೊಂಡ ಯುವತಿ ಪೋಷಕರು ಮಣಿಪಾಲ್​ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ವರನಿಗೆ ಯಾವುದೇ ಸೋಂಕು ಇಲ್ಲ ಎಂಬುದು ಪತ್ತೆಯಾಗಿದೆ.

ಈತನ ನಾಟಕದಿಂದ ನೊಂದ ಯುವತಿ, ಕಡೆಗೆ ವಿಜಯನಗರ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾಳೆ. ಇನ್ನು ಈ ಕುರಿತು ವಿಚಾರಣೆ ನಡೆಸಿದ ಪೊಲೀಸರಿಗೆ ಯುವತಿ ನನ್ನ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಆಕೆ ಬಿಯರ್​ ಕೊಡಿಸುವಂತೆ ಕೇಳುತ್ತಾಳೆ ಎಂದು ಸಬೂಬು ಹೇಳಿದ್ದು, ಸದ್ಯ ಪ್ರಕರಣ ಇತ್ಯರ್ಥಕ್ಕೆ ಪೊಲೀಸರು ಹರಸಾಹಸ ನಡೆಸಿದ್ದಾರೆ.

Comments are closed.