ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಿಹೊಳಿಯ ಕಣ್ವ ಪೀಠದ ಸ್ವಾಮೀಜಿಯ ಕಾಮಕಾಂಡ ಬಯಲಾಗಿದ್ದು, ಸ್ವಾಮೀಜಿಯ ಅಶ್ಲೀಲ ಚಾಟಿಂಗ್ ವೈರಲ್ ಆಗಿದೆ.
ಕಣ್ವಪೀಠದ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳ ಕಾಮುಕತನ ಬಯಲಾಗಿದ್ದು, ಉತ್ತರಕರ್ನಾಟಕದಲ್ಲಿ ಇವರು ಹೆಸರಾಂತ ಸ್ವಾಮೀಜಿ ಅಂತೆ. ಆದ್ರೆ ಸದ್ಯ ಮಹಿಳೆ ಜೊತೆ ಅಸಭ್ಯವಾಗಿ ಚಾಟಿಂಗ್, ಟಾಕಿಂಗ್ ಮಾಡ್ಕೊಂಡು ಅಸಹ್ಯವಾಗಿ ವರ್ತಿಸಿ, ಟೀಕೆಗೆ ಗುರಿಯಾಗಿದ್ದಾರೆ.
ಮಠದ ಭಕ್ತೆಯೊಬ್ಬರ ಜೊತೆ ಸ್ವಾಮೀಜಿ ಅಸಭ್ಯವಾಗಿ ವರ್ತಿಸಿದ್ದು, ಭಕ್ತೆಯೂ ಕೂಡ ಸಹಕರಿಸುವಂತೆ ನಾಟಕೀಯವಾಗಿ ಮಾತಾಡಿ, ಇದೀಗ ಸ್ವಾಮೀಜಿ ರಿಯಾಲಿಟಿ ಬಯಲು ಮಾಡಿದ್ದಾರೆ. ವಾಟ್ಸಪ್ ಚಾಟ್, ವೀಡಿಯೋ ಕಾಲ್ ರೆಕಾರ್ಡ್ ಮಾಡಿ, ವೈರಲ್ ಮಾಡಿದ್ದಾರೆ. ಇನ್ನು ತಮ್ಮ ಕರ್ಮಕಾಂಡದ ವಿಷಯ ಬಹಿರಂಗವಾಗಿದ್ದೇ ತಡ, ಸ್ವಾಮೀಜಿ ಪೀಠ ತ್ಯಾಗಕ್ಕೆ ಮುಂದಾಗಿದ್ದಾರೆ.
Comments are closed.