ಕರ್ನಾಟಕ

ಇಬ್ಬರ ಹೆಂಡರ ಮುದ್ದಿನ ಗಂಡ..!

Pinterest LinkedIn Tumblr


ಬೆಂಗಳೂರು: ಅನೈತಿಕ ಸಂಬಂಧ ಹಿನ್ನಲೆ, ಪತಿರಾಯ ಎರಡನೇ ಪತ್ನಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಕದ್ದು ಮುಚ್ಚಿ ಸಂಸಾರ ಮಾಡುತ್ತಿದ್ದ ಗಂಡನಿಗೆ ಮೊದಲನೇ ಪತ್ನಿಯ ಸಂಬಂಧಿಕರಿಂದ ಗೂಸಾ ತಿಂದು ತಗ್ಲಾಕೊಂಡಿರುವ ಘಟನೆಯೊಂದು ನಗರದ ವಿದ್ಯಾರಣ್ಯಪುರ ಬಳಿಯ ಸಿಂಗಾಪೂರ ಲೇಔಟ್​ನಲ್ಲಿ ನಡೆದಿದೆ.

ಮೊದಲ ಪತ್ನಿ ಭವ್ಯ ಅವರು ಬದುಕಿದ್ದಾಗಲೇ ಎರಡನೇ ಮದುವೆಯಾಗಿದ್ದ ರಘುನಂದನ್(ಗಂಡ) ಎಂಬಾತನು ಅಶ್ವಿನಿ ಅವರನ್ನು ಎರಡನೇ ಮದುವೆಯಾಗಿದ್ದನು, ಎರಡನೇ ಹೆಂಡತಿ ಅಶ್ವಿನಿ ಜೊತೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಇರುವುದನ್ನು ನೋಡಿದ ತಕ್ಷಣ ಸಂಬಂಧಿಕರಿಗೆ ಪೋನ್ ಮೂಲಕ ಕರೆಸಿಕೊಂಡು ಆರೋಪಿ ಗಂಡನಿಗೆ ಸಖತ್​ ಗೂಸಾ ಕೊಟ್ಟಿದ್ದಾರೆ.

ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಭವ್ಯಶ್ರೀ ಮತ್ತು ರಾಘುನಂದನ್ ಎಂಬ ದಂಪತಿ, ಈ ಇಬ್ಬರ ಲವ್ ಮ್ಯಾರೇಜ್​ಗೆ ಜಾತಿ ಅಡ್ಡಿಯಾಗಿತ್ತು. ಭವ್ಯ ಅವರು ಒಕ್ಕಲಿಗರ ಸಂಮುದಾಯಕ್ಕೆ ಸೇರಿದ್ದರೇ, ಗಂಡ ರಘುನಂದನ್ ಅವರು ಮರಾಠಿ ಸಮುದಾಯಕ್ಕೆ ಸೇರಿದ್ದರು. ಹೀಗಾಗಿ ಅಂತರ್ಜಾತಿ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.

ಬಳಿಕ ಮದುವೆಗೂ ಮುನ್ನ ದೈಹಿಕ ಸಂಪರ್ಕ ಬೆಳಸಿದ್ದ ರಘುನಂದನ್ ಅವರು, ಹುಡುಗಿ ಮದುವೆ ಆಗೋಣ ಎಂದು ರಘುನಂದನ್​ಗೆ ಹೇಳಿದರೇ, ಪದೇ ಪದೇ ಸತಾಯಿಸುತ್ತಿದ್ದನಂತೆ. ಆ ನಂತರ ಮದುವೆಯಾಗದೇ ಓಡಿ ಹೋಗಿದ್ದ ಆರನು, ಇಷ್ಟೆಲ್ಲ ಘಟನೆ ನಡೆದ ಬಳಿಕ ಭವ್ಯಶ್ರೀ ಅವರು ಆತನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಪ್ರಕಾರ ಅವರಿಬ್ಬರು ವಿವಾಹವಾಗಿದ್ದರು.

ಈ ನಡುವೆ ಮನೆಯಲ್ಲಿ ಮೊದಲ ಪತ್ನಿ ಹಾಗೂ ಗಂಡನಿಗೆ ಆಗಾಗ ಜಗಳವಾಗಿತ್ತು. ಈ ನಡುವೆ ರಘುನಂದನ್ ಹತ್ತಿರದ ಸಂಬಂಧಿ ಅಶ್ವಿನಿಯನ್ನು ಮದುವೆಯಾಗಿದ್ದನು. ಈಗ ಪತಿರಾಯನ ಎರಡನೇ ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿದ್ದರಿಂದ ಇಬ್ಬರಲ್ಲಿ ರಂಪಾಟ ಆರಂಭವಾಗಿದೆ ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Comments are closed.