ಕರ್ನಾಟಕ

ದನ ಕದಿಯಲು ಹೋದ ವ್ಯಕ್ತಿಯನ್ನೇ ಕೊಂದ ದನ !

Pinterest LinkedIn Tumblr

ಹಾಸನ: ಜಾನುವಾರು ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹಸುವೇ ಸಾಯಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗೋವಿಂದಪ್ಪ (55) ಮೃತ ವ್ಯಕ್ತಿ. ಈತ ಹಸುವನ್ನು ಕದ್ದು ವಾಹನಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ ಶವ ಪತ್ತೆಯಾಗಿದೆ.

ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಅಪಹರಿಸಿದ್ದ. ಅದನ್ನು ವಾಹನದಲ್ಲಿ ಸಾಗಿಸುತ್ತಾ ಎರಡು ಕಿಲೋ ಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾದಾಗ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ. ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಗೋವಿಂದಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Comments are closed.