ಕರ್ನಾಟಕ

Breaking News- ಪ್ರಜ್ವಲ್ ರೇವಣ್ಣ ರಾಜಿನಾಮೆಗೆ ನಿರ್ಧಾರ!

Pinterest LinkedIn Tumblr

ಹಾಸನ: ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಪ್ರಜ್ವಲ್ ರೇವಣ್ಣ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಘೋಷಣೆ ಮಾಡಿದ್ದಾರೆ.

ಮೊದಲ ಭಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದ ಪ್ರಜ್ವಲ್ ತನ್ನ ನಿರ್ಧಾರ ಬಗ್ಗೆ ಹೇಳಿಕೆ ನೀಡಿದ್ದು ತನ್ನ ತಾತ ದೇವೇಗೌಡರ ಸೋಲು ತೀವ್ರ ನೋವು ತಂದಿದೆ. ಅವರ ಕೊನೆ ಚುನಾವಣೆ ಸೋಲಿನಲ್ಲಿ ಮುಗಿಸಲು ಇಷ್ಟವಿಲ್ಲ. ರೈತರ ಬಗ್ಗೆ ಧ್ವನಿ ಎತ್ತಲು ದೇವೇಗೌಡರಿಂದ ಮಾತ್ರ ಸಾಧ್ಯವಾಗಿದ್ದು ಅವರನ್ನು ಮತ್ತೆ ಹಾಸನದಿಂದ ಸ್ಪರ್ಧಿಸುವಂತೆ ಕೋರುತ್ತೇನೆ, ಹಾಸದಿಂದ ಒಳ್ಳೆ ವಿಜಯೋತ್ಸವ ನೀಡುವಂತೆ ಜನರಲ್ಲಿ ಕೋರುತ್ತೇನೆ ಎಂದರು.

ಜನರು ಗೆಲ್ಲಿಸಿದ್ದಕ್ಕೆ ನಾನು ಅಬಾರಿಯಾಗಿದ್ದೇನೆ. ನಾನು ಎಂದೂ ಲೋಕಸಭಾ ಸೀಟ್ ಕೇಳಿರಲಿಲ್ಲ. ನನಗೆ ಪಕ್ಷ ನೀಡಿರುವ ಜವಬ್ದಾರಿಯ‌ನ್ನು ನಿರ್ವಹಿಸುತ್ತೇನೆ ಎಂದು ಪ್ರಜ್ವಲ್ ಹೇಳಿದ್ದಾರೆ.

ಅತ್ತ ಕಡೆ ತಾತ ದೇವೇಗೌಡರ ಸೋಲು, ಇತ್ತ ಮಂಡ್ಯದ ಸೋಲು ಪ್ರಜ್ವಲ್ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ತನ್ನ ಗೆಲುವನ್ನೂ ಕೂಡ ಸಂಭ್ರಮಿಸಲಾಗದ ಅಂತಂತ್ರ ಸ್ಥಿತಿಯಲ್ಲಿ ಪ್ರಜ್ವಲ್ ರೇವಣ್ಣ ಇದ್ದಾರೆ. ಈ ಬೆಳವಣಿಗೆ ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

Comments are closed.