ಕರ್ನಾಟಕ

ಮಂಡ್ಯ, ಹಾಸನ, ತುಮಕೂರು ಗೆಲ್ಲೋರ್ಯಾರು ಗೊತ್ತಾ?!: ಕೆಪಿಸಿಸಿ ಸಮೀಕ್ಷೆಯಿಂದ ಬಹಿರಂಗ!

Pinterest LinkedIn Tumblr

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನೂರಾರು ಸಮೀಕ್ಷೆಗಳು ನಡೆಯುತ್ತಿರೋ ಬೆನ್ನಲ್ಲೇ, ಕಾಂಗ್ರೆಸ್​​ ಕೂಡ ನಿಖರ ಸಮೀಕ್ಷೆ ನಡೆಸಿದ್ದು, ಅದರ ವರದಿ ಬಹಿರಂಗವಾಗಿದೆ.

KPCC ಕರ್ನಾಟಕದ ಎಲ್ಲಾ 28 ಕ್ಷೇತ್ರಗಳ ಸರ್ವೇಯನ್ನು ಮಾಡಿಸಿದ್ದು, ಸಮೀಕ್ಷೆಯಲ್ಲಿ ಕಾಂಗ್ರೆಸ್​ಗೆ 10, JDSಗೆ 3, ಬಿಜೆಪಿಗೆ 15 ಸ್ಥಾನ ಸಿಕ್ಕಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಚಾಮರಾಜನಗರ, ಕೋಲಾರ, ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ ಕಾಂಗ್ರೆಸ್​ ಪಾಲಾಗಲಿವೆ.

ಹಾಸನ, ಮಂಡ್ಯ, ತುಮಕೂರು 3 ಕ್ಷೇತ್ರಗಳನ್ನು ಜೆಡಿಎಸ್​ ತೆಕ್ಕೆಗೆ ತಗೆದುಕೊಳ್ಳಲಿದೆ. ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಮೈಸೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ, ಬೆಳಗಾವಿ, ಬೀದರ್, ವಿಜಯಪುರ, ಕೊಪ್ಪಳ, ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂದು ಕೆಪಿಸಿಸಿ ಸಮೀಕ್ಷೆ ಹೇಳಿದೆ.

Comments are closed.