ಕರ್ನಾಟಕ

ಇನ್ನು ಮುಂದೆ ಆಪರೇಷನ್ ಕಮಲ ಆಗುವುದಿಲ್ಲ, ಇನ್ಮುಂದೆ ಆಪರೇಷನ್ ಸಿದ್ದರಾಮಯ್ಯ ನಡೆಯುತ್ತೇ!

Pinterest LinkedIn Tumblr


ಹುಬ್ಬಳ್ಳಿ: ಇನ್ನು ಮುಂದೆ ಆಪರೇಷನ್ ಕಮಲ ಆಗುವುದಿಲ್ಲ, ಇನ್ಮುಂದೆ ಆಪರೇಷನ್ ಸಿದ್ದರಾಮಯ್ಯ ನಡೆಯುತ್ತೇ ಎಂದು ಮಾಜಿ ಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.

ಕುಂದಗೋಳದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಚುನಾವಣೆ ನಂತರ ಮೈತ್ರಿ ಸರ್ಕಾರ ಪತನವಾಗೋದು ಖಚಿತವಾಗಿದೆ. ಫಲಿತಾಂಶ ಬಳಿಕ ಆಪರೇಷನ್ ಕಮಲ ಆಗುವುದಿಲ್ಲ, ಆಪರೇಷನ್ ಸಿದ್ದರಾಮಯ್ಯ ಆಗುತ್ತದೆ ಎಂದರು.

ಮೈತ್ರಿ ಸರ್ಕಾರದ ಪತನದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಾತ್ರವಿದ್ದು, ಉಭಯ ಪಕ್ಷಗಳಲ್ಲನ ಅಸಮಾಧಾನದ ಹಿಂದೆ ಸಿದ್ದರಾಮಯ್ಯ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುರಿದು ಬೀಳಲಿದೆ ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದು, ಕೆಲವು ಕಾಂಗ್ರೆಸ್​ನ ರೆಬೆಲ್ ಶಾಸಕರು ನಡೆಯು ಕೂಡ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

Comments are closed.