ಕರ್ನಾಟಕ

ಮೋದಿ ತಾನೊಬ್ಬನೇ ಸರ್ಜಿಕಲ್ ಸ್ಟ್ರೈಕ್ ನ ಲಾಭ ಪಡೆದುಕೊಳ್ಳಲು ಹೊರಟಿರುವುದು ದೊಡ್ಡ ತಪ್ಪು: ಸಿದ್ದರಾಮಯ್ಯ

Pinterest LinkedIn Tumblr


ಹೊಸಪೇಟೆ: ಸರ್ಜಿಕಲ್ ಸ್ಟ್ರೈಕ್ ನಿಂದ ಪ್ರಧಾನಿ ಮೋದಿಯವರು ರಾಜಕೀಯ ಲಾಭ ಪಡೆದುಕೊಳ್ಳಲು ನೋಡುತ್ತಿರುವುದು ದೊಡ್ಡ ಮೂರ್ಖತನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿನ್ನೆ ಹೊಸಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಸೇನಾಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು. ಮೋದಿಯವರು ಗನ್ ಹಿಡಿದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರಾ? ಅದರ ಕ್ರೆಡಿಟ್ ನ್ನು ಮೋದಿಯವರು ಏಕೆ ಹೊರಬೇಕು ಎಂದು ಕೇಳಿದರು.

ಪಾಕಿಸ್ತಾನದ ಬಾಲಾಕೋಟ್ ವೈಮಾನಿಕ ದಾಳಿಗೆ ಮೋದಿ ಗನ್ ಹಿಡಿದು ಹೋಗಿದ್ದರಾ? ಸುಖಾಸುಮ್ಮನೆ ಅದರ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Comments are closed.