ಬೆಂಗಳೂರು: ಈಗಲ್ಟನ್ ರೆಸಾರ್ಟ್ನಲ್ಲಿ ಕೈ ಶಾಸಕರ ಹೊಡೆದಾಟ ಪ್ರಕರಣದಿಂದ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಒಳಗಾಯಿತು. ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಗಣೇಶ್ನನ್ನು ಬಂಧಿಸುವ ಮೂಲಕ ಈ ಗಲಾಟೆಯನ್ನು ತಣ್ಣಾಗಾಗಿಸಲು ಸರ್ಕಾರ ಮುಂದಾಗಿತ್ತು. ಈ ಗಲಾಟೆಯ ವಿಡಿಯೋ ಈಗ ಬಿಡುಗಡೆಯಾಗುವ ಮೂಲಕ ಕೈ ನಾಯಕರಲ್ಲಿ ಆತಂಕ ಮನೆ ಮಾಡಿದೆ. ಕಾರಣ ಇವರು ಜಗಳವಾಗಿರುವುದು ಒಂದು ಹೆಣ್ಣುಮಗಳ ವಿಚಾರಕ್ಕೆ ಎನ್ನಲಾಗಿದೆ.
ಈಗಲ್ಟನ್ ರೆಸಾರ್ಟ್ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದ ಪ್ರಕರಣದ ವಿಡಿಯೋ ಕುರಿತು ಕಾಂಗ್ರೆಸ್ ನಾಯಕರು ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ. ಈ ವಿಡಿಯೋ ಸಿಕ್ಕಿದರೆ ಈ ಇಬ್ಬರು ಶಾಸಕರ ನಡುವೆ ಯಾವ ವಿಚಾರಕ್ಕೆ ಗಲಾಟೆ ಆಯಿತು ಎಂಬ ಪುರಾವೆ ಸಿಗಲಿದೆ. ಇದರಿಂದ ಕಾಂಗ್ರೆಸ್ ಮುಜಗರ ಅನುಭವಿಸಲಿದೆ. ಈ ಹಿನ್ನೆಲೆ ಈ ವಿಡಿಯೋ ಬಿಡುಗಡೆಯಾಗದಂತೆ ಕಟ್ಟೆಚ್ಚರ ವಹಿಸಿದ್ದರು ಎನ್ನಲಾಗಿದೆ. ಆದರೆ, ಈ ವಿಡಿಯೋ ಬಿಡುಗಡೆಯಾಗುವ ಮೂಲಕ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿದೆ. ಅಲ್ಲದೆ ಇದು ಲೋಕಸಭಾ ಚುನಾವಣೆ ಮೇಲೆ ಕೂಡ ಪರಿಣಾಮ ಬೀರಲಿದೆ ಎನ್ನವ ಭಯ ಶುರುವಾಗಿದೆ.
ಅಂತಹದ್ದೇನಿದೆ ವಿಡಿಯೋದಲ್ಲಿ?
ಶಾಸಕ ಆನಂದ್ ಸಿಂಗ್-ಗಣೇಶ್ ಮಧ್ಯೆ ಜಗಳ ನಡೆಯಿತು ಎಂದು ಮಾತ್ರ ಯಾವ ವಿಷಯಕ್ಕೆ ಗೊತ್ತಿಲ್ಲ ಎನ್ನುತ್ತಿದ್ದ ನಾಯಕರು ಯಾಕೆ ಈ ರೀತಿ ಹೇಳಿಕೆ ನೀಡಿದ್ದರು ಎಂಬ ಸತ್ಯ ಬಯಲಾಗಿದೆ. ಈ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಒಂದು ಹೆಣ್ಣಿಗಾಗಿ ಎಂಬುದಾಗಿದೆ ಎನ್ನಲಾಗಿದೆ.
ಬಿಡುಗಡೆಯಾಗಿರುವ 5 ಸೆಕೆಂಡ್ಗಳ ವಿಡಿಯೋದಲ್ಲಿ ಶಾಸಕ ಆನಂದ್ ಸಿಂಗ್, ಶಾಸಕ ಗಣೇಶ್ರ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಇತ್ತ ಗಣೇಶ್ ಸಹ ಇದು ತಪ್ಪು. ಅಣ್ಣಾ ಬೇಡಣ್ಣಾ, ಅಂತಾ ಹೇಳುತ್ತಿದ್ದಾರೆ. ಆದರೂ ಆನಂದ್ ಸಿಂಗ್ ನನಗೆ ಹೊಡಿತೀಯಾ ಅಂತಾ ಅವಾಜ್ ಹಾಕಿದ್ದಾರೆ. . ಇವರಿಬ್ಬರ ಜಗಳದ ಮಧ್ಯೆ ಅವಳು ಅನ್ನೋ ಪದ ಬಂದು ಹೋಗುತ್ತದೆ. ಹೀಗಾಗಿ ಇವರಿಬ್ಬರ ಗಲಾಟೆಗೆ “ಆಕೆ” ಕಾರಣ ಎನ್ನಲಾಗಿದೆ.
ಆನಂದ್ ಸಿಂಗ್ ಹಾಗೂ ಗಣೇಶ್ ಮಧ್ಯೆ ಯಾವುದೇ ದ್ವೇಷ ಇರಲಿಲ್ಲ. ಮೊದಲು ರೆಸಾರ್ಟ್ ರೂಮ್ನಲ್ಲಿ ಭೀಮಾನಾಯ್ಕ್ ಹಾಗೂ ಆನಂದ್ ಸಿಂಗ್ ಮಧ್ಯೆ ಗಲಾಟೆ ನಡೆಯುತ್ತಿತ್ತಂತೆ. ಈ ವೇಳೆ ಜಗಳ ಬಿಡಿಸಲು ಗಣೇಶ್ ಹೋದಾಗ ಜಗಳ ತಾರಕಕ್ಕೇರಿದೆ ಎನ್ನಲಾಗಿದೆ.
ನಾನು ಹಲ್ಲೆ ಮಾಡಿಲ್ಲ ಎಂದು ಗಲಾಟೆಯಾದ ಮರುದಿನದಿಂದಲೂ ಹೇಳಿಕೆ ನೀಡುತ್ತಿದ್ದ ಗಣೇಶ್ ಅವರ ಮಾತಿಗೆ ಈ ವಿಡಿಯೋ ಸಾಕ್ಷಿಯಾಗಿದೆ ಎನ್ನಲಾಗಿದೆ.
Comments are closed.