ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟಿನ ಕೋಲಾಹಲವನ್ನು ಸೃಷ್ಠಿಸಿದ್ದ ‘ಆಪರೇಷನ್ ಆಡಿಯೋ’ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಯಡಿಯೂರಪ್ಪ ಅವರೊಂದಿಗೆ ಶಿವನ ಗೌಡ ಪಾಟೀಲ, ಹಾಸನ ಶಾಸಕ ಪ್ರೀತಂ ಗೌಡ ಅವರಿಗೂ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ.ಪಾಟೀಲ್ ಈ ಮೂವರು ನಾಯಕರಿಗೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲು ಅನುಮತಿ ಸೂಚಿಸಿದರು. ವೈಯಕ್ತಿಕ ಒಂದು ಲಕ್ಷ ಬಾಂಡ್, ಸಾಕ್ಷ್ಯ ನಾಶ ಮಾಡಬಾರದು, ಪೊಲೀಸರಿಗೆ ತನಿಖೆಗೆ ಸಹಾಯ ಮಾಡಬೇಕು ಮತ್ತು ಅನುಮತಿಯಿಲ್ಲದೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗಬಾರದು ಎಂದು ಷರತ್ತು ವಿಧಿಸಿಲಾಗಿದೆ.
Comments are closed.