ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ತಯಾರಿ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ಮಾಡಲು ಆಯೋಜಿಸಲಾಗಿರುವ ಸಮನ್ವಯ ಸಮಿತಿ ಸಭೆಗೆ ಆಗಮಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಭೆಯ ಆರಂಭಕ್ಕೂ ಮುನ್ನವೇ ತರಾತುರಿ ಮಾಡಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ನ ಡ್ಯಾನೀಶ್ ಅಲಿ ಸೇರಿದಂತೆ ಸಮನ್ವಯ ಸಮಿತಿ ಸದಸ್ಯರು ಇಂದು ಕೆ.ಕೆ.ಗೆಸ್ಟ್ಹೌಸ್ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಗೆ ತಡವಾಗಿ ಆಗಮಿಸಿದ ಸಿಎಂ ಕುಮಾರಸ್ವಾಮಿ, ಸಭೆ ಆರಂಭಕ್ಕೂ ಮುನ್ನ “ನನ್ನ ಮಗನ ಸಿನಿಮಾ, ನಮ್ದೇ ಬ್ಯಾನರ್ ನಿರ್ಮಿಸಲಾಗಿದೆ. ಇಂದು ಒರಾಯನ್ ಮಾಲ್ನಲ್ಲಿ ಪ್ರಿಮಿಯರ್ ಷೋ ಇದೆ. ಹಾಗಾಗಿ ನಾನು ಅಲ್ಲಿಗೆ ಬೇಗ ಹೋಗಬೇಕು, ಹೆಚ್ಚು ಹೊತ್ತು ಇರಲ್ಲ. ನೀವು ಪ್ರಿಮಿಯರ್ ಷೋಗೆ ಬನ್ನಿ. ಸಮನ್ವಯ ಸಮಿತಿ ನಿರ್ಧಾರಕ್ಕೆ ಬದ್ಧವಾಗಿರ್ತೀನಿ. ನಮ್ ಪಕ್ಷದ ಪರವಾಗಿ ಡ್ಯಾನಿಶ್ ಅಲಿ ಇರ್ತಾರೆ,” ಎಂದು ಹೇಳಿದ್ದಾರೆ.
Comments are closed.