ಕರ್ನಾಟಕ

ಕಾಂಗ್ರೆಸ್ ಸೇರಿದ್ದ ಜೆಡಿಎಸ್‌ನ 7 ಬಂಡಾಯ ಶಾಸಕರ ಸ್ಥಿತಿಗತಿ ಏನಾಗಿದೆ?

Pinterest LinkedIn Tumblr


ಜಾತ್ಯಾತೀತ ಜನತದಳ ಪಕ್ಷ(ಜೆಡಿಎಸ್)ದಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ 7 ಶಾಸಕರ ಪೈಕಿ ಗೆದ್ದವರ್ಯಾರು ಹಾಗೂ ಸೋತವರ್ಯಾರು ಎಂದು ಪಟ್ಟಿ ಇಲ್ಲಿದೆ.
ಬಂಡಾಯ ಶಾಸಕರಾದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ್, ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರಿ 2018ರಲ್ಲಿ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಈ ಏಳು ಶಾಸಕರ ಪೈಕಿ ಚಾಮರಾಜಪೇಟೆಯಿಂದ ಜಮೀರ್ ಅಹ್ಮದ್, ಪುಲಿಕೇಶಿನಗರದಿಂದ ಅಖಂಡ ಶ್ರೀನಿವಾಸಮೂರ್ತಿ, ಹಗರಿಬೊಮ್ಮನಹಳ್ಳಿಯಿಂದ ಭೀಮಾ ನಾಯ್ಕ್ ಗೆಲುವು ಸಾಧಿಸಿದ್ದಾರೆ.
ಇನ್ನುಳಿದ ನಾಲ್ಕು ಶಾಸಕರು ಮಾಗಡಿಯಿಂದ ಹೆಚ್ ಸಿ ಬಾಲಕೃಷ್ಣ, ನಾಗಮಂಗಲದಿಂದ ಚೆಲುವರಾಯಸ್ವಾಮಿ, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ ಮತ್ತು ಶ್ರೀರಂಗಪಟ್ಟಣದಿಂದ ರಮೇಶ್ ಬಂಡಿಸಿದ್ದೇಗೌಡ ಅವರು ಸೋಲು ಕಂಡಿದ್ದಾರೆ.

Comments are closed.