ಕರ್ನಾಟಕ

ನಮ್ಮೆಲ್ಲರ ಕಾಮನ್‌ ಎನಿಮಿ ಬಿಜೆಪಿ, ಅದಕ್ಕೆ ಮತ ಹಾಕಬೇಡಿ: ದೊರೆಸ್ವಾಮಿ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ 30 ರಾಜ್ಯವಿದೆ. ಎಲ್ಲ ಕಡೆಗೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಆ ಪಕ್ಷದ ಇಚ್ಛೆಯಾಗಿದೆ. ಈಗ ನಮ್ಮೆಲ್ಲರ ಕಾಮನ್‌ ಎನಿಮಿ ಬಿಜೆಪಿ ಅದಕ್ಕೆ ಮತ ಹಾಕಬೇಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗೌರಿ ದಿನ ಸಮಾವೇಶದಲ್ಲಿ ಮಾತನಾಡಿದ ದೊರೆಸ್ವಾಮಿ, ಈಗ ಚುನಾವಣೆ ಬರುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ ಎಂದರು.

ಎಲ್ಲ ರಾಜ್ಯದಲ್ಲೂ ಬಿಜೆಪಿ ಅಧಿಕಾರವೇ ಇರಬೇಕು ಎಂಬುದು ಆ ಪಕ್ಷದ ನಾಯಕರ ಇರಾದೆ. ಕೆಲವು ರಾಜ್ಯ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯದಲ್ಲಿ ಬಿಜೆಪಿ ಆಡಳಿತ ವಿದೆ. ಎಲ್ಲ ರಾಜ್ಯವೂ ಬಿಜೆಪಿ ಕೈಯಲ್ಲಿರಬೇಕು ಎಂದು ಅದು ಮುನ್ನುಗ್ಗುತ್ತಿದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಅವರನ್ನು ಆದಷ್ಟು ನಮ್ಮ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ದೊರೆಸ್ವಾಮಿ ಕರೆ ನೀಡಿದರು.

Comments are closed.