ಕರ್ನಾಟಕ

ಕರ್ನಾಟಕದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ

Pinterest LinkedIn Tumblr


ತುಮಕೂರು: ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿದ್ದ ಮರ್ಯಾದಾ ಹತ್ಯೆ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಈ ಹಿಂದೆ ಹಲವಾರು ಯುವ ಪ್ರೇಮಿಗಳು ಈ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದಾರೆ. ಈಗ ಮತ್ತೊಂದು ಪ್ರಕರಣ ವರದಿಯಾಗಿದೆ.

ತ್ಯಾಮಗೊಂಡ್ಲು ಹೋಬಳಿಯ ಲಕ್ಕಪ್ಪನಹಳ್ಳಿಯಲ್ಲಿ ಅನ್ಯಜಾತಿಯ ಯುವಕನೊಂದಿಗೆ ಪ್ರೀತಿಸಿ ಮನೆಬಿಟ್ಟು ಹೋಗಿದ್ದ ಹುಡುಗಿ ಲಕ್ಷ್ಮೀದೇವಿಯನ್ನು ತಂದೆ ಚಿಕ್ಕ ನರಸಿಂಹಯ್ಯ ಮರ್ಯಾದೆ ಹತ್ಯೆ ಮಾಡಿದ್ದಾನೆ .

ಕಳೆದ 20 ದಿನಗಳ ಹಿಂದೆ ಯುವಕ ಲಕ್ಷ್ಮೀನಾರಾಯಣನ ಜೊತೆಯಲ್ಲಿ ಮನೆ ಬಿಟ್ಟು ಹೋಗಿದ್ದ ಲಕ್ಷ್ಮೀದೇವಿಯನ್ನು ಮತ್ತೆ ಹುಡುಕಿ ಕರೆದುಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿ ಅಪ್ಪ ಚೆನ್ನಾಗಿ ಹೊಡೆದಿದ್ದಾರೆ. ಇದೇ ಕಾರಣಕ್ಕಾಗಿ ಆಕೆ ವಿಷ ಸೇವಿಸಿದ್ದಾಳೆ.

ಇದರಿಂದ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಇಷ್ಟಕ್ಕೆ ಬಿಡದ ಪೋಷಕರು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಿದ್ದಾರೆ. ಈ ಘಟನೆ ಈಗ ಬೆಳಕಿಗೆ ಬಂದಿದೆ.

ಎಸ್.ಪಿ ಅಮರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ವಿನ ತನಿಖೆ ನಡೆಸುತ್ತಿದ್ದಾರೆ.

ಲಕ್ಷ್ಮೀದೇವಿ ಮಂಡಿಗೆರೆ ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದಳು. ಲಕ್ಷ್ಮೀದೇವಿ ಒಕ್ಕಲಿಗ ಕೋಮಿಗೆ ಸೇರಿದ್ದರೆ ಯುವಕ ಲಕ್ಷ್ಮೀನಾರಾಯಣ ಭೋವಿ ಜನಾಂಗದವನು.

ಅರೋಪಿ ತಂದೆ ಚಿಕ್ಕ ನರಸಿಂಹಯ್ಯನನ್ನು ಪೋಲಿಸರ್ ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.

Comments are closed.