ಮಡಿಕೇರಿ: ನವೆಂಬರ್ ಹತ್ತರಂದು ಕೊಡಗಿನಲ್ಲಿ ಟಿಪ್ಪು ಜಯಂತಿ ನಡೆಯಲಿದ್ದು, ಅದನ್ನು ವಿರೋಧಿಸಿ ಅಂದು ಬೆಳಗ್ಗೆ ಆರರಿಂದ ಸಂಜೆ ಆರರ ವರೆಗೆ ಬಂದ್ ನಡೆಸಲು ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ಕರೆ ನೀಡಿದೆ.
ಅಂಗಡಿ ಮಳಿಗೆ ಬಂದ್ ಮಾಡಿ ವಾಹನ ಸಂಚಾರ ಸ್ಥಗಿತಗೊಳಿಸುವ ಜತೆಗೆ ಶಾಲಾ ಕಾಲೇಜು ಬಂದ್ ಮಾಡಲು ಸೂಚನೆ ನೀಡಿರುವ ಸಮಿತಿ, ಬಲತ್ಕಾರದಿಂದ ಟಿಪ್ಪು ಜಯಂತಿ ಆಚರಿಸಿದರೆ ತಡೆಯುವುದಾಗಿ ಹೇಳಿಕೆ ನೀಡಿದೆ.
ಮುಂಜಾಗ್ರತೆ ಕ್ರಮವಾಗಿ ಕೊಡಗಿನಲ್ಲಿ ಜಿಲ್ಲಾಡಳಿತದಿಂದ 144 ಸೆಕ್ಷನ್ ಜಾರಿ ಸಾಧ್ಯತೆ ಇದ್ದು, ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಪಡೆ ಆಗಮಿಸಿದೆ. ಗಡಿಯಲ್ಲಿ ಕಟ್ಟೆಚರ ವಹಿಸಿದ್ದು, ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ.
ನವೆಂಬರ್ ಹತ್ತರಂದು ಕರಾಳ ದಿನಾಚರಣೆ ಹಾಗೂ ಕುಟ್ಟಪ್ಪ ಹುತಾತ್ಮ ದಿನಾಚರಣೆ ನಡೆಸುವುದಾಗಿ ಸಮಿತಿ ಹೇಳಿದೆ. ದಕ್ಷಿಣ ಕೊಡಗಿನ ಕೊಡವ ಸಮಾಜಗಳ ಒಕ್ಕೂಟದಿಂದ ಪೊನ್ನಂಪೇಟೆಯಿಂದ ವಿರಾಜಪೇಟೆ ತನಕ ವಾಹನ ಜಾಥಾ ನಡೆಯಲಿದೆ.
Comments are closed.